ಈ ಕೊರೊನಾ ಕಾಲದಲಿ

ಕಾವ್ಯಯಾನ

ಈ ಕೊರೊನಾ ಕಾಲದಲಿ

ಬಿ.ಶ್ರೀನಿವಾಸ

A Major Coronavirus Outbreak Will Test India to the Limit | Time

ಸಾಲು ಸಾಲು ಹೊರಟಿವೆ
ದೂರದೂರಿಗೆ
ನಿಲ್ಲುವುದಿಲ್ಲ
ಬೇರುಗಳ ಹುಡುಕುವ ಪಯಣ
ಮಣ್ಣು ಸೇರುವ ತನಕ

ಒದ್ದೆಯಾಗಿವೆ
ಸಾಲಿಡಿದು ಹೊಂಟ
ಇರುವೆಗಳ ಕಣ್ಣೂ

ಮಾಧ್ಯಮದವನೊಬ್ಬ ಅರಚುತ್ತಲೇ ಇದ್ದಾನೆ
“ನಿರಾಶ್ರಿತರೇಕೆ ಸಾಯಲು ಬರ್ತಾರೆ?”

ಭೂಮಿ ಕಂಪಿಸುತಿದೆ

Coronavirus Lockdown: Will die of hunger before any disease, say home-bound migrant  workers - The Financial Express

ಮಣ್ಣು ಸೇರುವ ಜೀವಗಳ ತವಕಕೆ!
ಮನುಷ್ಯರ ನಿಖರ ಸಂಖ್ಯೆ ತಿಳಿಸಿದ ಈ ಕಾಲಕೆ


4 thoughts on “ಈ ಕೊರೊನಾ ಕಾಲದಲಿ

  1. “ಈ ಕೊರೋನಾ ಕಾಲದಲ್ಲಿ ” ಕವಿತೆ ಈಗಿನ ದುಸ್ಥಿತಿಯನ್ನು ಎತ್ತಿ ಹಿಡಿದಿದೆ.. ಕರಾಳ ಮುಖಗಳನ್ನು ತೋರಿಸುವಂತಿದೆ… ಕವಿ ಬಿ.ಶ್ರೀನಿವಾಸ ರವರು ಮಗ್ಗಲುಗಳನ್ಬು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ…

  2. ಸರ್
    ಕರೊನ ಕಾಲಘಟ್ಟದಲ್ಲಿ
    ಅನುಭವಿಸಿದ ನೋವು
    ಯಾತನೆಗಳು ತುಂಬಾ
    ಮಾರ್ಮಿಕವಾಗಿ ಮೂಡಿಬಂದಿದೆ ಸರ್

  3. ಕೊರೊನಾದ ಪರಿಣಾಮಗಳು, ಸಾವಿನ ಸಮಯದಲ್ಲಾದ ತವರಿನ ನೆನಪುಗಳು, ಶೋಚನೀಯ ಬದುಕು ಮತ್ತೊಮ್ಮೆ ಕಣ್ಣ ಮುಂದೆ ಹಾದು ಹೋದಂತಾಯಿತು ಸರ್.

Leave a Reply

Back To Top