ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಧನಪಾಲ ನಾಗರಾಜಪ್ಪ

ಧನ

ನಿನ್ನ
ದನಿ
ಕೇಳರಾರೂ
ನಿನ್ನ
ಪಾಡು
ನೋಡರಾರೂ
ನೆಲ, ಜಲ
ಜನ, ಮನ
ಅಂತೆಲ್ಲಾ ಯಾಕೆ‌ ಬಡಬಡಿಸುವೆ?
ಧನವೇ ಇಂಧನ
ಧನವೇ ಪ್ರಧಾನ
ಜಮಾನ ಇದರ ದೀವಾನ
ನಿನಗೆ ಅರ್ಥವಾಗದೆ ಧನು?


ಜಾಡ್ಯ

ಇಲ್ಲಿಯ ತನಕ
ಏಡ್ಸ್ ಒಂದರ ಹೊರತು
ಬಹುತೇಕ ಜಾಡ್ಯಗಳಿಗೆ
ಇಲಾಜು ಮಾಡಬಲ್ಲರು
ಈಗಿನ ವೈದ್ಯರು
ಶ್ಲಾಘನೀಯ ಸಾಧನೆಯೇ ಸರಿ

ಜಾತಿಯ ಅಹಂ ಕೂಡಾ
ಮಾರಕ ಜಾಡ್ಯ ಅಲ್ಲವೆ?
ದೂರವಿರಿ ಇದು ಸಾಂಕ್ರಾಮಿಕ
ಮುಂದೆ ಎಂದಾದರೂ
ಏಡ್ಸಿಗೂ ಸಹ
ಔಷಧ ಕಂಡುಹಿಡಿಯಬಹುದೇನೋ!
ಆದರೆ ಜಾತಿಯ ಜಾಡ್ಯಕ್ಕೆ
ಮದ್ದು ಅದೆಂದು ಸಿಗುವುದೋ ಧನು?

***************************************

About The Author

Leave a Reply

You cannot copy content of this page

Scroll to Top