ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಜಗತ್ತೇ ತನ್ನ ಸುತ್ತ ಸುತ್ತುತಿದೆ ಎಂದಾಗ ಹೊರಟು ಬಿಡಬೇಕು ಎಲ್ಲೆಲ್ಲೂ ಪ್ರೀತಿ ನೋಟವಿದೆ ಎಂದಾಗ ಹೊರಟು ಬಿಡಬೇಕು ಇಂದ್ರಚಾಪ ಮೂಡಿಸುವ ಹಗಲಿರುಳುಗಳೇನು ನಿರಂತರವೇ ಇಂದಿಗಿಂದಿನ ಬದುಕು ರಂಗೇರಿದೆ ಎಂದಾಗ ಹೊರಟು ಬಿಡಬೇಕು ಸುಖ ಸಂತಸಗಳು ಪ್ರತಿ ವರುಷ ಬರುವ ವಸಂತನ ತರವೇನು ಹರುಷ ನಲಿ ನಲಿದು ಉಕ್ಕುತಿದೆ ಎಂದಾಗ ಹೊರಟು ಬಿಡಬೇಕು ಎದೆಗೂಡ ಭಿತ್ತಿಯಲಿ ಒಲುಮೆ ಉಲಿವಾಗ ಸ್ವರ್ಗವೂ ನಾಚದೇನು ಸಮುಲ್ಲಾಸದಿ ಜೀವ ಗಂಧ ತೀಡುತಿದೆ ಎಂದಾಗ ಹೊರಟು ಬಿಡಬೇಕು ಇನಿಯನ ಉಸುರುಸಿರ ಬಿಸುಪು ಬೀಗಿ ಮೈ ಮನ ಮರೆಸದಿರದೇ ಕನಸು ಕಚಗುಳಿಯಿಟ್ಟು ಮಾಗುತಿದೆ ಎಂದಾಗ ಹೊರಟು ಬಿಡಬೇಕು ಹೊಸತನವ ತುಂಬುವ ಸೂರ್ಯನ ಪ್ರತಿ ಹುಟ್ಟೂ ವಿಸ್ಮಯಾತೀತ  ಬೆಳಕು ತರುವ ಬೆಳಗಲ್ಲಿ ಬೆಡಗಿದೆ ಎಂದಾಗ ಹೊರಟು ಬಿಡಬೇಕು ಲೋಕದ ಲೇಸರ್ ಕಣ್ಣುಗಳಲ್ಲಿ ಸದಾ ಮುಂಚೂಣಿಯಲ್ಲಿರಲು ಹೇಗೆ ಸಾಧ್ಯ ತನ್ನಿರುವೇ ಸುತ್ತಲೂ ಖುಷಿ ತರುತಿದೆ ಎಂದಾಗ ಹೊರಟು ಬಿಡಬೇಕು  ಮನ ಮನಗಳಲ್ಲಿ ಮನೆ ಮಾಡಿ ಮುದವನ್ನೇ ಸೂಸಬೇಕು ಸಹೃದಯದಿ ಸೌಖ್ಯ, ಸ್ವಾಸ್ಥ್ಯ, ಭಾಗ್ಯ ಬಾಚಿ ತಬ್ಬುತಿದೆ ಎಂದಾಗ ಹೊರಟು ಬಿಡಬೇಕು “ಸುಜೂ” ಳ ಬಾಳು ಸೊಗದಿ ಭವ ಭಾವದೊಳು ಬೆರೆತು ಜಿಗಿಯುತಿದೆ ಇನ್ನೇನು ಸಕಲವೂ ಇಲ್ಲಿಲ್ಲೇ ಒದಗಿದೆ ಎಂದಾಗ ಹೊರಟು ಬಿಡಬೇಕು. ************ ಸುಜಾತಾ ಲಕ್ಮನೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಪ್ಪ ಅಪ್ಪ ಎಂದರೆ ನನ್ನಾಸರೆಯ ಹೆಗಲು ಕಡುಗಪ್ಪಿನಂತಹ ಮುಗಿಲು ಬಯ್ಬಿರಿದ ಭೂಮಿಗೆ ಸುರಿವ ಮಳೆಯ ಹನಿಯ ಮುತ್ತಿನ ಸಾಲು ಅಪ್ಪ ಎಂದರೆ ಪ್ರೀತಿಯ ಹೊನಲು ಸವಿಜೇನಿಗೆ ಬೆರೆತ ಹಾಲು ಮಗಳ ಕಾಯುವ ಒಡಲು ಜೊತೆಗಿದ್ದರೆ ಜಗದಲಿ ನನ್ನ ಕೈಯೇ ಮೇಲು ಅಪ್ಪ ಎಂದರೆ ನಗುವ ದ್ವನಿಯ ಕೊರಳು ಸದಾ ಜೊತೆಗಿರುವ ನೆರಳು ಹಿಡಿದು ಹೊರಟರೆ ಅಪ್ಪನ ಕಿರುಬೆರಳು ಖುಷಿಯ ಬುಗ್ಗೆಯಲಿ ಮೆರವಣಿಗೆ ಹಗಲಿರುಳು ಅಪ್ಪನಿಲ್ಲದಾ ಈ ಕ್ಷಣವು ಹೃದಯದಲವಿತಿದೆ ನಿರಾಸೆಯು ಯಾರಲ್ಲಿ ಹುಡುಕಲಿ ಅಪ್ಪನೊಲವು ಅಪ್ಪನ ಕಳೆದುಕೊಂಡ ಈ ಬದುಕು ಕಣ್ಣೀರ ಮಡುವು. ******** ನಿರ್ಮಲಾ ಆರ್.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಸಂಕ್ರಾಂತಿ

ಸಂಕ್ರಮಣ ಅದ್ಭುತವ ತಂದರೆ ತರಲಿ ಈ ಸಂಕ್ರಮಣ ಬೇಡವೆನ್ನಲು ಯಾರು ನಾನು ಬದುಕು ತಂದ ಅಷ್ಟಿಷ್ಟು ನೆಮ್ಮದಿ ಜೊತೆಗೆ ಸಿಕ್ಕರೆ ಸಿಗಲಿ ಜೇನು ಸುಳಿಯಲ್ಲೋ ಮಕರದ ಬಾಯಲ್ಲೋ ಸಿಗದೆ ಸಾಗುತಿರಲಿ ಪಯಣ ಮಮಕಾರ ಕರ ಪಿಡಿದು ಸಂತಸದ ಸೆಲೆ ಹರಿದು ಆಗುತಿರಲಿ ಗಮನ …ಉದ್ದಕ್ಕೂ ಇರಲಿ ಅವನ ಕರುಣ ********** ಡಾ.ಗೋವಿಂದ ಹೆಗಡೆ

ಕಾವ್ಯಸಂಕ್ರಾಂತಿ Read Post »

ಕಾವ್ಯಯಾನ

ಕಾವ್ಯಸಂಕ್ರಾಂತಿ

ಸಾಕೊಂದಿಷ್ಟು ಕವಿತಾ ಸಾರಂಗಮಠ ಉತ್ತರಾಯಣನ ಪುಣ್ಯ ಕಾಲಕೆ ಗದ್ದಲದ ಅಂಧರ ಮಂಡಿಪೇಟೆಯಲ್ಲಿ ಸಂಕ್ರಮಣ ಕಾಲಕೆ ಕಣ್ಣಾವೆಗಳಾದರೂ ಸಂಧಿಸಿವೆ ಸಾಕೊಂದಿಷ್ಟು ಈ ಕಾಲಕೆ..! ಹ್ಯಾಪಿ ಪೊಂಗಲ್ ಡೇ ಎಂಬ ಜಾಹೀರಾತಿಗೆ ಸಂತೋಷ ಉಕ್ಕಿ ಮೋಬೈಲ್ ಮಾತಲಿ ತೊಡಗಿದವರ ನಡುವೆಯೂ ಕುಂಟರಿಬ್ಬರ ತೆವಳುವಿಕೆಗೆ ಗಾಳಿಯಾದರೂ ಬೀಸಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಭವಿಷ್ಯ ಕೇಳಿ ಮದುವೆಯಾಗಬಾರದು ಎಂಬ ನುಡಿಗೆ,ಕಣ್ಣುಗಳ ಒದ್ದೆಮಾಡಿಕೊಂಡಿದ್ದೇನಿಲ್ಲಿ ಬಿಕ್ಕಿಸಿ ಅತ್ತಾಗ ಬೀದಿ ನಾಯಿಯಾದರೂ ನಲುಗಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಹಬ್ಬವೆಂದರೆ ಕಿಬ್ಬದಿಯ ಕೀಲು ಮುರಿಸಿಕೊಂಡು,ಗೇಣು ಭೂಮಿಗೆ ಕಾದಾಡಿ ನ್ಯಾಯ ಕೋರ್ಟಿನಲ್ಲಿ ಹೊಟ್ಟೆಗೆ ಅಂಬಲಿಯಾದರೂ ಸಿಕ್ಕಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಬೇಡಿದ್ದಿಲ್ಲಿ ದೊರಕದೆ ಹಿಡಿಚೆಲ್ಲಿ ಬೊಗಸೆ ಬಾಚಿಕೊಂಡವನ ನಡುವೆ,ಮಣ್ಣು ಸಿಗದವನಿಗೂ ಹೊನ್ನು ಸಿಕ್ಕಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಎಳ್ಳು-ಬೆಲ್ಲ, ಕುಸುರೆಳ್ಳು-ಅರಷಿಣ ತಿರುವಿ,ಮಂಡಿಪೇಟೆಯೆಂದರೆ ಭಿಕ್ಷೆಯೆಂದಲ್ಲ,ದೇವರಿಗೆ ಹೂವಾದರು ಸಿಕ್ಕಿತಲ್ಲ ಹಿತ್ತಲಿನ ಗಿಡದಲ್ಲಿ.. ಸಾಕೊಂದಿಷ್ಟು ಈ ಕಾಲಕೆ..! *********

ಕಾವ್ಯಸಂಕ್ರಾಂತಿ Read Post »

You cannot copy content of this page

Scroll to Top