ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ನೀ ಅಮರ ಎಚ್. ಶೌಕತ್ ಆಲಿ ಭಾರತದ ಸಂವಿಧಾನ ಶಿಲ್ಪಿ ಡಾ||ಭೀಮರಾವ್ ಅಂಬೇಡ್ಕರ್ ಮಹಾಮಾನವವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಅಪರಿಮಿತ ಜ್ಞಾನ ಭಾರತ ದೇಶದ ಮಹಾನ್ ಮೇಧಾವಿ ಭಾರತೀಯ ಬೌದ್ಧ ಮಹಾಸಭಾದ ಸಂಸ್ಥಾಪಕ ಅಂಬೇಡ್ಕರ್ ಸಮಾನತೆಗಾಗಿ ಶಿಕ್ಷಣಕ್ಕಾಗಿ ಸಂಘಟನೆಗಾಗಿ ನಿಂತ ಶಕ್ತಿ ಶೋಷಣೆಗೆ ಒಳಗಾಗಿ ವರ್ಗಗಳ ದೀನ-ದಲಿತರ ದೇವಮಾನವ ದೌರ್ಜನ್ಯ ದಬ್ಬಾಳಿಕೆ ಅವಮಾನಗಳ ವಿರುದ್ಧ ಸಿಡಿದೆದ್ದ ಭೂಪ ನವ ಸಮಾಜದೊಂದಿಗೆ ನವಭಾರತ ನಿರ್ಮಾತೃ ವಾದ ಅಂಬೇಡ್ಕರ್ ತಿರಸ್ಕರಿಸಲ್ಪಟ್ಟ ಬಹಿಷ್ಕರಿಸಲ್ಪಟ್ಟ ಜನರ ನೋವಿಗೆ ಸ್ಪಂದಿಸಿ ಸಮಾಜದಲ್ಲಿ ಕಳಂಕಿತರ ಕಳಿಸಿ ಮಾನವೀಯತೆ ನೀಡಿದ ಮೌಢ್ಯ ಅಜ್ಞಾನ ಅಂಧಾನುಕರಣೆಯ ಬಾಳಿಗೆ ಅರಿವಿನ ಬೆಳಕಾಗಿ ನಿಂತ ರಾಷ್ಟ್ರೀಯ ನಾಯಕನಾಗಿ ವಿಶ್ವದ ಜನತೆಗೆ ದಾರಿದೀಪವಾದ ಅಲ್ಪಸಂಖ್ಯಾತರ ಅಸ್ಪೃಶ್ಯರ ಜಾತಿಗಳ ಸಮನ್ವಯಗೊಳಿಸಿದ ಹಕ್ಕು ಮತ್ತು ಸ್ವಾತಂತ್ರ್ಯದ ಬದುಕಿಗಾಗಿ ನಿರಂತರ ಹೋರಾಡಿದ ದೇಶ ಮತ್ತು ಸ್ವಾತಂತ್ರ್ಯದ ನಿಮ್ನ ವರ್ಗಗಳಿಗೆ ಪ್ರಾತಿನಿಧ್ಯ ಕಲ್ಪಿಸಿದ ಜಾತಿ ಧರ್ಮ ನೀತಿ ಕರ್ತವ್ಯಗಳಲ್ಲಿ ಸೌಹಾರ್ದ ಬಾವ ಸಮರ್ಪಿಸಿದ ಚಿಂತನೆ ಆಲೋಚನೆಯ ಮನಸ್ಸಿಗೆ ಭಾವನೆಗಳನ್ನೆಲ್ಲಾ ರಾಷ್ಟ್ರ ಪ್ರೇಮಕ್ಕಾಗಿ ಸಿದ್ಧಾಂತ ವಿಚಾರಲಹರಿ ಭಾಷಣ ಗಳೆಲ್ಲವೂ ಜನರ ಪ್ರಗತಿಗಾಗಿ ನೊಂದರು ಬೆಂದರು ಹಿಂಸೆ ಸಹಿಸಿದರು ಭಾರತೀಯರ ಭವಿಷ್ಯಕ್ಕಾಗಿ ಹೋರಾಟದ ಬದುಕು ಸಾರ್ಥಕತೆ ಕಂಡಿತು ದಲಿತರ ಏಳಿಗೆಗಾಗಿ ಸಮಗ್ರ ರಾಷ್ಟ್ರೀಯ ನಾಯಕರೆಲ್ಲರ ಜನಸಾಮಾನ್ಯರ ಹಿತ ನೀನು ಕೋಟ್ಯಂತರ ಭಾರತೀಯರ ಮನದಾಳದ ಮೌನದ ಭಾಷೆ ನೀನು ಸೋದರತೆ ಸಮಾನತೆ ಸೌಹಾರ್ದತೆಯ ವಿಶ್ವಾಸ ಗಳೆಲ್ಲವೂ ಇನ್ನೂ ನಿರಂತರ ಅಂಬೇಡ್ಕರ್ ನಿನ್ನ ಸಿದ್ಧಾಂತ ನೀ ತೋರಿದ ದಾರಿ ಎಂದು ಎಂದೆಂದಿಗೂ ಅಮರ ಮತ್ತೊಮ್ಮೆ ಹುಟ್ಟಿ ಬಾ ಈ ದೇಶದ ಅಂಬೇಡ್ಕರ್ ವಿಶ್ವಶಾಂತಿಗಾಗಿ ದೇಶ-ವಿದೇಶಗಳಲ್ಲಿ ದ್ವೇಷದ ಜ್ವಾಲೆ ಆರಿಸಿ ಪ್ರೀತಿಯ ಬೆಸುಗೆಗಾಗಿ ಮಾನವಕುಲದ ಮಹಾನ್ ಚೇತನವಾಗಿ ಸ್ನೇಹದ ಸೆಲೆಯಾಗಿ ಅವತರಿಸು ಮತ್ತೊಮ್ಮೆ ಅಂಬೇಡ್ಕರ್ ವಸುಂಧರೆಯ ಮಗುವಾಗಿ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂಕ ನಾಯಕ ಬಸವರಾಜ ಕಾಸೆ ಎತ್ತ ನೋಡಿದರತ್ತ ಅಸಮಾನತೆ ಅಸಹಕಾರ ಶೋಷಣೆ ಅಸ್ಪೃಶ್ಯತೆಗಳ ಮೆಟ್ಟಿದವನೊಬ್ಬನು ನೇತಾರ ಪ್ರತಿ ಹೆಜ್ಜೆಗಳ ಗುರುತು ಎಷ್ಟೋ ಹೊಣೆಗಳ ಹೆಗಲು ಎಲ್ಲವೂ ಎಲ್ಲರಿಗಾಗಿ ಆದರೂ ನಾಳೆಗಳ ಹೊನಲು ಕುಡಿಯಲು ಕೊಡದ ತೊಟ್ಟು ನೀರು ಹುಟ್ಟು ಹಾಕಿದ ಛಲವು ಜೋರು ಲಗ್ಗೆ ಹಾಕದೆ ಬಿಡಲಿಲ್ಲ ನಿಷೇಧಿತ ಕೆರೆ ಕಟ್ಟೆಗಳಿಗೆ ಹಕ್ಕುಗಳ ಜಾಗೃತಿ ಮೊಳಗಿಸಿದರು ಮುಗಿಲಿಗೆ ಗುಡಿ ಗುಂಡಾರಗಳಿಗೆ ಪ್ರವೇಶಿಸಿ ಚಳುವಳಿ ಹುರಿದುಂಬಿಸಿ ತುಂಬಿದ ಆತ್ಮವಿಶ್ವಾಸವೇ ಬಳುವಳಿ ಶ್ರೇಣಿ ಪದ್ಧತಿಗಳ ಜಾತಿ ಸ್ತ್ರೀ ಧಮನಗಳ ನೀತಿ ಹುಟ್ಟಡಗಿಸಿದ ರೀತಿ ಅದುವೇ ಜೀವನ ಪ್ರೀತಿ ಬಂದರೂ ಬಹಳ ಬಾಳು ತುಂಬಾ ಕಷ್ಟ ಎದುರಿಸುತ್ತಲೇ ನಿಂತರು ಸಹನೆಯಿಂದ ಶಿಷ್ಟ ಕಂಡ ಕನಸುಗಳ ಸಾಕಾರ ಸಂವಿಧಾನದ ಕಾಯಕ ಬಹಿಷ್ಕೃತ ಭಾರತದ ಮೂಕ ನಾಯಕ ಶಿಕ್ಷಣವೊಂದೇ ಪ್ರಖರ ಮಾಧ್ಯಮ ಎಲ್ಲಾ ಸಮಸ್ಯೆಗಳಿಗೂ ಗುದ್ದು ಬಡವರೆಲ್ಲರ ಬೆಳವಣಿಗೆಗೆ ಆದರೂ ಹೋರಾಡಿ ಮದ್ದು ಎಲ್ಲಾ ಎಲ್ಲೆಗಳ ಮೀರಿ ಶ್ರಮಿಸಿದ ಸಮಾಜ ಪ್ರವರ್ತಕ ಭೀಮರಾವ್ ಅಂಬೇಡ್ಕರರಾದರು ಆಧುನಿಕ ಭಾರತದ ನಿರ್ಮಾಪಕ ****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅವತಾರ ಪುರುಷ ಸಂಮ್ಮೋದ ವಾಡಪ್ಪಿ ಕಡುಕಷ್ಟದಲಿ ಕುದ್ದು ನೊಂದು ಬೆಂದು ಹೀಯಾಳಿಸುವವರ ಮಧ್ಯೆ ಎದ್ದು ತಾ ನಿಂದು ಮೇಲೆದ್ದು, ಕುಕ್ಕುವ ಕಂಗಳ ನೇರದಿ ನೋಡಿ ಅಧ್ಯಯನ ದಾರಿಯಲಿ ಬರೆದ ಭಾರತದ ಮುನ್ನುಡಿ ಅರಿತರು ಅನೇಕ, ಅನೇಕರು ಮರೆಮಾಚಿದರು ಬಿಡದ ಹಠಯೋಗಿ ಸದಾ ತಪದಿ ಮಿಂದು ದಾರಿಗುಂಟ‌ ಮುಳ್ಳುಗಳು ಬದಿಗೊತ್ತುತ ನಡೆ ಭೀಮನ ಸಾಹಸ, ಸಂವೇದನೆ ದೇಶ ಏಳಿಗೆಯಡೆ ಅಸ್ಪೃಶ್ಯತೆಯ ನೂಕಿ ಮಹಾಸಮರವ ಸಾರಿ ದೀನರ ಬಂಧು ಮಾತೃಭೂಮಿಯ ಮೇಲೆತ್ತುವ ಗುರಿ ಸತತ ಚಲನೆ, ಹೊಟ್ಟೆ ಬಟ್ಟೆ ಕಟ್ಟಿ ಸಿದ್ಧಿಸಿದ ತಪವು ಕೈಯಲಿ ಪುಸ್ತಕ, ಮಸ್ತಿಷ್ಕದಿ ಅಪಾರ ಜ್ವಾನ ಸದಾ ಏಳಿಗೆಯ ಜಪವು ಸಂವಿಧಾನದ ಶಿಲ್ಪಿ, ರೂಪುರೇಷೆಗಳನು ರಚಿಸಿ ಜಗದ ಮೂಲೆಗೂ ತಲುಪಿ ರಾಷ್ಟ್ರವನು‌ ಬಿಂಬಿಸಿ ಸದಾ ಸಹಾಯಕೆ ಕೈನೀಡುತ ಜನಾಂಗವ ಮೇಲೆತ್ತಿದ ಸಿದ್ಧಿ‌ ಪುರುಷ ಬುದ್ಧಂ‌ ಶರಣಂ ಎನ್ನುತ ಶಾಂತಿಯ ದೂತ ಇವನೇ ಅವತಾರ ಪುರುಷ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಮೂಗಪ್ಪ ಗಾಳೇರ ನಾವು ಹುಟ್ಟಿದಂತೆ ಆತನು ಹುಟ್ಟಿದ್ದ ಯಾಕೋ ಗೊತ್ತಿಲ್ಲ ನಮ್ಮಲ್ಲಿ ಇರದ ಬೆಳಕು ಆತನಲ್ಲಿತ್ತು ಬುದ್ಧನೋ, ಬಸವಣ್ಣನೋ ಯಾರ ತದ್ಭವವೋ ಗೊತ್ತಿಲ್ಲ ಅವರ ಮುಖ ಚರಿತ್ರೆ ಇತನಲ್ಲಿ ಅಡಗಿತ್ತು ಚಮ್ಮಾರನ ಕೈಯಲ್ಲಿ ಲೇಖನಿ ನರ್ತಿಸಿದಾಗ ಪ್ರಳಯವಾದಿತೆಂದು ಕಾದು ಕುಳಿತ ಕೆಲವರಿಗೆ ಭೂಮಿ ಕಂಪಿಸಿದಂತೆ ನಡುಕ ಹುಟ್ಟಿತು ಹೌದು ಆತ ಸೃಷ್ಟಿಸಿದ್ದು ಪ್ರಳಯವೆ ಯಂತಹ ಪ್ರಳಯ ಕಪ್ಪು ಮೋಡಗಳೆಲ್ಲ ಬಿಳಿಯ ಮೋಡಗಳೊಂದಿಗೆ ಮಿಲನ ನಡೆಸಿ ಭೂ ಗರ್ಭದೊಳಗೆ ಮಾನವೀಯ ಕೂಸುಗಳ ಜನನದ ಪ್ರಳಯ ಆ ಪ್ರಳಯಗಳಿಗಾ ಕಣ್ಣು ಮೂಗು ನಾಲಿಗೆ ಕಿವಿ ಚರ್ಮ ಎಲ್ಲೆಂದರಲ್ಲಿ ಉಸಿರಾಡುತ್ತಿವೆ ಹರಿದಾಡುತ್ತಿವೆ ಎಲ್ಲೆಂದರಲ್ಲಿ ಬದುಕು ಕಟ್ಟಿಕೊಳ್ಳುತ್ತಿವೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಜಯಂತಿಗೆ ರಾಮಾನುಜ ನೆನಪು ಡಾ.ನಾ.ಗೀತಾಚಾರ್ಯ ದಲಿತರನ್ನು ಬಲಿತರು ಹೆಗಲಲಿ ಹೊತ್ತು ದೇವಾಲಯದರ್ಶನ ಮಾಡಿಸುವ ಹೊತ್ತು ಎಂದು ಬರುವುದೊ ಎಂದು ಕಾಯುತಿಹೆ ನಾನಂತು. ಜಾತ್ಯತೀತ ಭಾರತದ ಸಮಾನತೆಯ ಈ ಹೊತ್ತು. ಇದು ಕನಸಲ್ಲ, ಹುಚ್ಚಲ್ಲ ,ನಡೆದಿದೆ ಸತ್ಯಕಥೆ. ತಿರುಪ್ಪಾಣರೆಂಬ ದಲಿತ ಆಳ್ವಾರರ ಜೀವನಗಾಥೆ. ಮುನಿಯೆ ವಾಹನನಾಗಿ ಗರ್ಭಗುಡಿಗೇ ಹೊತ್ತೊಯ್ದ ಕಥೆ.ಸಾವಿರವರ್ಷದ ಇತಿಹಾಸ ಮರುಕಳಿಸಬಾರದೇಕೆ. ಅಂಬೇಡ್ಕರ್ ಗಾಂಧಿ ಬಸವರಿಗೂ ಮೊದಲೆ. ರಾಮಾನುಜರಿತ್ತಿದ್ದರು ದಲಿತರಿಗೆ ಹೆಗಲೆ. ದಲಿತರ ಕಾಲ್ತೊಳೆದ ಕೆರೆನೀರ ಕುಡಿದಿದ್ದರಾಗಲೆ. ‘ತಿರುಕುಲ’ರೆಂದು ಕೂರಿಸಿದ್ದರು ದೇವರ ಬಗಲೆ. ಅಂಬೇಡ್ಕರರೆ ನೀವೇನೋ ಆದಿರಿ ದಲಿತ ಸೂರ್ಯ. ಸಂವಿಧಾನದಲಿ ಕೊಟ್ಟಿರಿ ಸಮಾನತೆ, ರಕ್ಷಣೆ, ತೂರ್ಯ. ಎತ್ತಿಹಿಡಿದಿರಿ ವಸುದೈವ ಕುಟುಂಬದ ಧ್ಯೇಯ. ಆದರಿನ್ನೂ ಆಗಿಲ್ಲ ನಮಗೇ ಸೂರ್ಯೋದಯ. ರಾಮಾನುಜ ಸಹಸ್ರಮಾನದ ಈ ಹೊತ್ತಿನಲ್ಲೂ ದಲಿತರ ಮೇಲಿನ ದೌರ್ಜನ್ಯ ಅವ್ಯಾಹತವಯ್ಯೊ. ಮುಟ್ಟಿದರೆ, ನೀರೆತ್ತಿದರೆ, ಎದುರಾಡಿದರೆ ಮೈಲಿಗೆಯ ಘಾತದಲೆ ಬಿದ್ದಿಹರಲ್ಲ ಬಲಿತರೆಲ್ಲ, ಅಯ್ಯ ಎದ್ದೇಳಿ ಬಲ್ಲಿದರೆ ಬಲ್ಮೆತೋರಿ ಸಂವಿಧಾನಕೆ. ಮುನಿವಾಹನರೆನಿಸಿ ದಲಿತರಿಗೆ, ಹಾರಿಸಿ ಪತಾಕೆ. ಭಕ್ತಿಸಾಮ್ರಾಜ್ಯದಲಿಹುದು ದಲಿತ ಭಕ್ತರ ಸಾಲುಭಂಜಿಕೆ. ಲೋಕಸಾರಂಗರಾಗಿ ಲೋಕಕೆ ಸಾರಲೇಕೆ ಅಂಜಿಕೆ ***** ಟಿಪ್ಪಣಿಗಳು: 1)ತಿರುಪ್ಪಾಣಾಳ್ವಾರ್: 12ಜನ ಆಳ್ವಾರ್ ಸಂತರಲ್ಲಿ ಒಬ್ಬರಾದ ದಲಿತ ಭಕ್ತರು. (8-9ನೇ ಶತಮಾನ) 2) ಮುನಿಯ ವಾಹನರಾಗಿ: ಈ ಆಳ್ವಾರರು ಶ್ರೀರಂಗದ ದೇವಾಲಯದ ಮುಂದೆ ಕುಳಿತು ನಿತ್ಯ ವೀಣೆ ನುಡಿಸುತ್ತ ಧ್ಯಾನದಲ್ಲಿರುತ್ತಿದ್ದರು. ಒಂದು ದಿನ ದೇವಾಲಯದ ಪ್ರಧಾನ ಅರ್ಚಕರಾದ ಲೋಕಸಾರಂಗರು ಕಾವೇರಿಯಿಂದ ದೇವರಿಗೆ ಮಡಿನೀರು ಒಯ್ಯುವಾಗ ಅಡ್ಡವಿದ್ದ ಇವರನ್ನು ಕೂಗಲು,ಭಕ್ತಿಯಲಿ ಮೈಮರೆತು ಕೇಳಿಸದಿರಲು, ಸಣ್ಣ ಕಲ್ಲು ಎಸೆದಾಗ ಎಚ್ಚರವಾಗಿ ದೂರ ಸರಿಯುವರು. ಸಾರಂಗರು ದೇವರಿಗೆ ಅಭ್ಯಂಜನ ಮಾಡುವಾಗ ಹಣೆಯಲ್ಲಿ ರಕ್ತ ಕಂಡು ಗಾಬರಿಯಾಗಲು ‘ನನ್ನ ಭಕ್ತನಿಗೆ ಹೊಡೆದು ಅಪಚಾರವಾಗಿದೆ, ಕೂಡಲೆ ಅವನನ್ನು ಹೆಗಲಲಿ ಹೊತ್ತು ಇಲ್ಲಿಗೆ ಕರೆದುತಾ’ರೆಂದು ದೇವ ವಾಣಿಯಾಗಲು,ಸಾರಂಗರು ಎಲ್ಲರನ್ನೂ ಕೂಡಿಕೊಂಡು ಆಳ್ವಾರರ ಬಳಿ ಹೋಗಿ ತಪ್ಪೋಪ್ಪಿ ನಮಸ್ಕರಿಸಿ ಒಲ್ಲೆನೆಂದರೂ ಬಿಡದೆ ಹೆಗಲಲಿ ಕೂರಿಸಿಕೊಂಡು ದೇವರಮುಂದಿಳಿಸುವರು. ಇದರಿಂದ ಇವರಿಗೆ ‘ಮುನಿವಾಹನ’ ಹೆಸರೂ ಇದೆ. 3) ದಲಿತರಿಗೆ ಹೆಗಲು: 11ನೇ ಶ.ದಲ್ಲೇ ರಾಮಾನುಜಾಚಾರ್ಯರು ದಲಿತ ಶಿಷ್ಯ-ದನುರ್ದಾಸ-ನ ಹೆಗಲ ಆಸರೆಯಲ್ಲಿರುತ್ತಿದ್ದರು. 4)ದಲಿತರ ಕಾಲ್ತೊಳೆದ: ಕೆರೆಯಲ್ಲಿ ದನುರ್ದಾಸನ ಪಾದ ತೊಳೆದ ನೀರನ್ನು ತೀರ್ಥವಾಗಿ ಸ್ವೀಕರಿಸಿ ಭಕ್ತರ ಶ್ರೀಪಾದ ತೀರ್ಥದ ಮಹತ್ವ ಸಾರಿದ್ದರು. 5)ತಿರುಕುಲದವರು: ದೆಹಲಿಯಿಂದ ಚೆಲುವನಾರಾಯಣನ ವಿಗ್ರಹ ತರಲು ತಮಗೆ ಜೊತೆಯಾಗಿದ್ದ ದಲಿತರನ್ನು ತಿರುಕುಲತ್ತಾರ್ ( ಶ್ರೇಷ್ಠ ಕುಲದವರು)ಎಂದು ಕರೆದು ದೇವಾಲಯದೊಳಗೆ ಕರೆದೊಯ್ದು ಅವರಿಂದಲೇ ಉತ್ಸವವನ್ನು ಹೊರಡಿಸುವ ಸಂಪ್ರದಾಯ ಹಾಕಿದರು. ಇದು ಈಗಲೂ ಮೇಲುಕೋಟೆಯಲ್ಲಿ ನಡೆಯುತ್ತಿದೆ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಒಳದನಿ                                                    ಶಹನಾಜ್ ಬಿ. ಸಿರಿವ್ಯಾಲ ಒಳದನಿ ಅಂದು ನೀನು ನೆಟ್ಟಿದ್ದ ಜಾತ್ಯತೀತತೆಯ ವೃಕ್ಷ ಇಂದು ರಾಜಕೀಯ ವಿಷ ಗಾಳಿಗೆ ಸಿಲುಕಿ ನಿತ್ಯವೂ ನರಳುತ್ತಿದೆ. ನೀಲಿ , ಕೆಂಪು ಕ್ರಾಂತಿಗಳ ನಡುವೆಯೂ ದಮನಿತರ ಕಣ್ಣುಗಳಲ್ಲಿ ನೋವು ಮಡುಗಟ್ಟಿದೆ. ಅದ್ಯಾಕೋ ನಿನ್ನ  ಬುದ್ಧನಿಂದಲೂ ಈ ಸಮಾಜವನ್ನು ತಿದ್ದಲಾಗಲಿಲ್ಲ. ವೇಮುಲನ ಮುಖ ಪ್ರತಿ ಬಾರಿ ನೆನೆದಾಗಲೂ , ಎಲ್ಲೋ ಬಾಪುವಿನ ನಾಡಲ್ಲಿ ಕೃಶ ದೇಹಗಳಿಂದ ರಕ್ತ ಒಸರಿದಾಗಲೂ , ಮತ್ತೆಲ್ಲೋ ಅವಳ ತಿಂದುಂಡ ದೇಹಕ್ಕೆ ಬಲವಂತದ ಬೆಂಕಿ ಹಚ್ಚಿದಾಗಲೂ , ನಿನ್ನ ಆಳೆತ್ತರದ ಸದ್ಗ್ರಂಥವ  ಹಿಡಿದ ದಾರಿ ತೋರುತ್ತಿರುವ ಪ್ರತಿಮೆ ಧುತ್ತೆಂದು ಸ್ಮೃತಿಪಟಲದಲ್ಲಿ  ಮಿಂಚಿ ಮಾಯವಾಗುತ್ತದೆ. ನೀ ಮತ್ತೆ ಹುಟ್ಟಿ ಬಾ ಎಂದು ಹೇಳಲಾರೆ. ನಿನ್ನ ಚಿಂತನೆಗಳು ನಿನ್ನವರನ್ನ ಮಾತ್ರ ಆವರಿಸಿಲ್ಲ  ಈ ಧರಣಿಯ ಎಲ್ಲ ಶೋಷಿತರ  ನೋವಿಗೆ ಮುಲಾಮಾಗಿವೆ. ನವ ಸಮಾಜ ಸಮ ಸಮಾಜ ಕಟ್ಟುವ ಕನಸಿಗೆ  ರಂಗು ಹಚ್ಚಿವೆ . ಇದ್ಯಾಕೆ ‘ಈ’ ಜನ ಹೀಗೆ ಎಂದು ಪ್ರತಿ ಬಾರಿ ಕುಸಿದಾಗಲೂ ಶಕ್ತಿ ಕೊಡುವ ಮಹಾ ಚೇತನವೇ ನಿನಗೊಂದು ನನ್ನ ಸಲಾಮು.   *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೊರತೆ ಜ್ಯೋತಿ ಡಿ.ಬೊಮ್ಮಾ ಧರ್ಮ ದೇವರುಗಳೆಲ್ಲ ಕಿರುಚಾಟದ ಸರಕುಗಳಾದವು.. ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳಲಿರುವ ಕಚ್ಚಾ ವಸ್ತುಗಳಾದವು.. ಜಾತಿಯ ಹೆಸರಲ್ಲಿ ರಂಪಾಟವೆಬ್ಬಿಸುವ ಕ್ಷುಲ್ಲಕ ಕಾರಣಗಳಾಗಿರುವವು.. ಈ ವಿಷಯಗಳೆ ಈಗ ಪ್ರಚಲಿತ ವಿದ್ಯಾಮಾನವಾಗಿರುವವು.. ಮನುಷ್ಯರ ಮನಸ್ಸುಗಳ ಮದ್ಯ ಗೋಡೆಗಳೆದ್ದವು ಬಣ್ಣಗಳು ಹಗೆ ಸಾಧಿಸುವ ಸಾಧನಗಳಾದವು ದೇಶ ಗಡಿಗಳು ಇವುಗಳಡಿ ನರಳಾಡಿದವು ಮನುಷ್ಯರೆಲ್ಲ ಮುಖವಾಡಗಳಡಿ ಬಳಲುವ ಚಮರಗೀತೆಗಳಾದರು.. ಆರಂಭ ಎಲ್ಲಿಂದ. .ಅಂತ್ಯ ಯಾವದು.. ಗೊತು ಗುರಿಯಿಲ್ಲದ ವಿಚಾರ ಧಾರೆಗಳು.. ಒಬ್ಬರ ವಾದ ಮತ್ತೊಬ್ಬರು ಒಪ್ಪಬಾರದೆಂಬ ಹಠ ಪ್ರತಿಯೊಬ್ಬರಲ್ಲೂ.‌. ಈಗ ಮಂದಿರ ಮಜ್ಜಿದ ಎರಡರ ಗೋಡೆಗಳು ಮೌನವಾಗಿ ಆಲಿಸುತ್ತಿರುವವು..ಎರಡರಲ್ಲೂ ಬೆರೆಯುವದು ಕಲ್ಲು ಮಣ್ಣೆ ಮತ್ತೆಕೆ ಕಚ್ಚಾಡುತ್ತಿರುವರವರು..! ದೂರದ ಪ್ರತಿಮೆಗಳಲ್ಲಿ ಗಾಂಧಿ ,ಅಂಬೇಡ್ಕರ್ ನಿಶ್ಯಬ್ದ ವಾಗಿ ನಿಂತಿರುವರು.. ತಾವು ಸಾರಿದ ತತ್ವಗಳು ಇವರು ಬಳಸಿಕೊಳ್ಳುತ್ತಿರುವ ಪರಿ ಕಂಡು.. ಬುದ್ದ ಬಸವಣ್ಣರು ಅಚ್ಚರಿಗೊಂಡಿರುವರು ತಾವು ಜಗಕ್ಕೆ ಸಾರಿದ ಸಮಾನತೆ ಮಂತ್ರವೆ ನಶಿಸಿ ಅಸಮಾನತೆ ಹೋಗೆ ಎಲ್ಲೆಲ್ಲೂ ಹರಡಿರುವದು ಕಂಡು.. ಮಹಾನುಭಾವರ ತತ್ವಗಳೆಲ್ಲ ಪುಸ್ತಕದಲ್ಲೆ ಉಳಿದುಹೋದವು.. ಅವರ ಹೆಸರುಗಳು ಮಾತ್ರ ನಮ್ಮ ಸ್ವಂತದ್ದಾದವು.. ಬುಧ್ದ ಬಸವ ಅಂಬೇಡ್ಕರ್ ಮುಖದಲ್ಲಿ ಈಗಲೂ ಮಂದಹಾಸವಿದೆ.. ಮನುಜ ಕುಲವೊಂದೆ ವಲಂ. ಎಂದು ಕಾಣುವ ಉತ್ಕಟ ಬಯಕೆ ಇದೆ. ಆದರೆ…ಆಚರಿಸುವ ನಮ್ಮಲೆ ಎನೋ ಕೊರತೆ ಇದೆ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀನಿಲ್ಲದ ಈ ಹೊತ್ತು ಬಿದಲೋಟಿ ರಂಗನಾಥ್ ದೇಶ ಸುಡುವ ಕಣ್ಣುಗಳ ನಡುವೆ ನಿನ್ನ ಹೆಜ್ಜೆಗಳ ಸವಾರಿ ಹೋಗುತ್ತಲೇ ಇದೆ ಬಿಸಿಲು ಬೇಗೆಗೆ ಸೊಪ್ಪಾಕದೆ ಬರೆದ ಸಂವಿಧಾನ ಕರುಳು ನೋಯುತ್ತಿದೆ ಸೂಜಿಗೆ ದಾರ ಸೇರಿಸಿ ನಾಟಾಕುವ ಕೈಗಳಿಗೆ ಹೆದರಿ ನಿನ್ನುಸಿರನು ಸೇರಿಸಿ ಬರೆದ ಬೇರು ಸಂವಿಧಾನದಲಿ ನಿನ್ನ ನಿನ್ನವರ ಕನಸುಗಳು ಆಯಾಸವಿಲ್ಲದೆ ಆಡುತ್ತಿದ್ದವು ಆದರೇ ಕತ್ತರಿ ತೋರಿಸುತ್ತಲೇ ಇವೆ ಹಿಡಿಗಾತ್ರದ ಮನಸುಗಳು ಬರೆದ ಸಂವಿಧಾನದ ಪುಟಗಳ ಚೂರು ಮಾಡಲು ಬೆವರಲೇ ಬೆಂದ ನಿನ್ನ ಜನರ ಆಶಾಗೋಪುರಕೆ ನೀನೆ ಬೇಲುದಾರ ಸುಡುವ ಮನಸುಗಳ ದಾರಿಯ ಮೇಲೆ ನಿನ್ನೆಜ್ಜೆಗಳ ಸಾಂತ್ವಾನದ ಉಸಿರಾಟ ಬೆವರ ಬಿಕ್ಕಳಿಕೆಯಲಿ ನಿನ್ನುಟ್ಟೆ ಜೀವ ಜಲ ನೀನಿಲ್ಲದೇ ಹೋಗಿದ್ದರೆ ಮೌಢ್ಯತೆಯ ಬೆಂಕಿ ಉರಿದು ಎಷ್ಟೊಂದು ಮುಗ್ಧ ಮನಸುಗಳ ಆಹುತಿಗೆ ಬಲಿಯಾಗುತ್ತಿದ್ದವೋ ಆದರೇ ನಿನ್ನ ಹೆಜ್ಜೆಗಳ ಮೇಲೆ ನಡೆದ ಜಾತಿ ಸುಟ್ಟ ಮನಸುಳಿಗೂ ಬೆನ್ನು ನೋವು ನೀನಿಲ್ಲದ ಈ ಹೊತ್ತು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂಕ ಭಾರತದ ನಾಯಕ ನಾಗರಾಜ ಹರಪನಹಳ್ಳಿ ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ || ಪಲ್ಲವಿ|| ನನ್ನ ಅವ್ವಂದಿರ ಅಕ್ಷರದ ಬೆಳಕು ನೀನೋ ಬಡ ಭಾರತದ ಬಾಬಾ ಸಾಹೇಬ ನೀನೋ ಜಾತಿವಾದಿಗಳ ಕೈಯ ಬೊಗಸೆ ಕೆಂಡ ನೀನೋ ಮನುಷ್ಯವಾದಿಗಳ ಬದುಕ ಬೆಳದಿಂಗಳೊ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು‌‌ ನೀನೋ|| ಬಡವರ ಪಾಲಿನ ಬೆಳಕು ನೀನೋ ಬಹುತ್ವ ಭಾರತವನ್ನು ತಿಳಿದವ ನೀನೋ ಮನುವಾದಿಗಳ ಕಣ್ಣು ತೆರೆಸಿದವ‌ ನೀನೋ ಬ್ರಿಟಿಷರ ಮನಮನ‌ ಗೆದ್ದವ ನೀನೋ ಷಾಹು ರಾಜನ ಹೃದಯ ಆಳ್ದವ ನೀನೋ ಮೂಕ ಭಾರತದ ಮೂಕ‌ನಾಯಕ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು‌‌ ನೀನೋ|| ಬಹಿಷ್ಕೃತ ಭಾರತದ ಕಣ್ಮಣಿ ನೀನೋ ಜನುಮ‌ ಜನುಮಕೂ ನಾಯಕ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು‌‌ ನೀನೋ|| *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾಬಾಸಾಹೇಬ ತಾವು ದೇವರಾದರೆ! ಡಿ‌. ಎಮ್.ನದಾಫ್. ಗುಲಾಮಗಿರಿಯನ್ನು ಬುಡ ಸಮೇತ ಕಿತ್ತು ಅಜ್ಞಾನ, ಅವಮಾನಗಳನ್ನು ಧೈರ್ಯದಿಂದ ಒದ್ದು ದಿಕ್ಕಿಲ್ಲದವರಿಗೆ ಧವಳ ಕೀರ್ತಿ ತಂದುಕೊಟ್ಟು ಮಾನವತೆಯನ್ನು ಮರಳಿ ಸ್ಥಾಪಿಸಿದ ಅಂಬೇಡ್ಕರ್ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ಯಜ್ಞ-ಯಾಗ ಪ್ರಯಾಗಗಳನ್ನೆಲ್ಲ ಪ್ರಜ್ಞೆ, ಕರುಣೆ ಶೀಲದಲ್ಲಿ ಕಂಡವನೇ ಸ್ವರ್ಗ,ಮುಕ್ತಿ,ಬಂಧನಗಳನ್ನೆಲ್ಲ ಜ್ಞಾನ,ಸಮಾನತೆ,ಸೇವೆಯಲ್ಲಿ ಮಿಂದವನೇ ಮತ್ತೆ ನೀ ದೇವರಾದಾಗ ಬಾಯಿಗೆ ಉಗುಳುಬಟ್ಟಲು,ಬಾರಿಗೆ ನೆನಪಾಗುತ್ತವೆ. ಶಾಸ್ತ್ರ, ಪುರಾಣ ಆಗಮಗಳಿಗೆ ಬೀಗ ಹಾಕಿ ಶತಶತಮಾನಗಳ “ಕರ್ಮಫಲ”ಗಳ ನೊಗ ಕಿತ್ತು ಹಾಕಿ ಪಟ್ಟ ಭದ್ರರಿಗೆ ಬೆಟ್ಟದಂಥ ಸವಾಲಾದವನೇ ನೀ ದೇವರಾಗಬೇಡ ನೀ ದೇವರಾದರೆ ಮತ್ತೆ ಕಿವಿಯಲ್ಲಿ ಕಾದ ಸೀಸ ಹೊಯ್ದಂತೆ ನಾಲಿಗೆ ಸೀಳಿ ಬಗೆದಂತೆ ಕನಸು ಬೀಳುತ್ತದೆ. ಅದಕ್ಕಾಗಿ ಅಂಬೇಡ್ಕರ್ ದೇವರಾಗಬೇಡ,ದೊರೆಯಾಗಬೇಡ, ಗುರುವಾಗು,ಮಾರ್ಗದರ್ಶಿಯಾಗು,ನಮಗೆ ತತ್ವ ಜ್ಞಾನಿಯಾಗು ಅಂಬೇಡ್ಕರ್ ನೀ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ********

ಕಾವ್ಯಯಾನ Read Post »

You cannot copy content of this page