ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನೀರಿಗೇತಕೆ ಬಣ್ಣವಿಲ್ಲ? ಮಹಾಂತೇಶ ಮಾಗನೂರ ಅರೆ ಯಾರು ಹೇಳಿದರು ನೀರಿಗೆ ಬಣ್ಣವಿಲ್ಲವೆಂದು… ನೋಡಿಲ್ಲಿ ಕವಿತೆ ಸಾರಿ ಹೇಳುತಿದೆ ನೀರಿಗೂ ತರತರದ ಬಣ್ಣಗಳುಂಟು ಎಂದು ನೀರಿಗೇತಕೆ ಬಣ್ಣವಿಲ್ಲ? ಧುಮ್ಮಿಕ್ಕುವ ಜಲಪಾತದಿ ಹಾಲಿನಂತಹ ಬಿಳುಪು ಸೂರ್ಯಾಸ್ತದ ಸಮಯದಲ್ಲಿ ಸಾಗರದಿ ನಸುಗೆಂಪು ನೀರಿಗೇತಕೆ ಬಣ್ಣವಿಲ್ಲ? ಆಗಸದಿಂದ ನೋಡಿದೊಡೆ ನೀರೆಲ್ಲ ತಿಳಿನೀಲಿ ಕಾನನದಿ ಹರಿಯುವ ಜುಳು ಜುಳು ನೀರು ಪ್ರಕೃತಿಯ ಬಣ್ಣದಲಿ ನೀರಿಗೇತಕೆ ಬಣ್ಣವಿಲ್ಲ? ಬೆಟ್ಟಗಳಲಿ ಸುಳಿ ಸುಳಿದಾಡಿ ಹರಿಯುವುದು ಝರಿಯಾಗಿ,ಗಿಡ ಮರಗಳಿಗೆ ನೀಡುತ ಉಸಿರು ಕಾಣುವದು ಹಸಿರು ಹಸಿರು! ನೀರಿಗೇತಕೆ ಬಣ್ಣವಿಲ್ಲ? ಆಕಾಶದಿಂದ ಧರೆಗಿಳಿಯುತ ಸೂರ್ಯರಶ್ಮಿಯ ಚುಂಬಿಸಿ ಕಾಣುವುದಿಲ್ಲವೇ ಬಣ್ಣ ಬಣ್ಣದ ಮೋಹಕ ಕಾಮನಬಿಲ್ಲು ನೀರಿಗೇತಕೆ ಬಣ್ಣವಿಲ್ಲ? ರೈತನೊಂದಿಗೆ ಬೆರೆತು ಗದ್ದೆಯಲ್ಲಿ ಹರಿದಾಡಿ, ಪೈರಿನೊಂದಿಗೆ ಸೇರಿ ಹಚ್ಚ ಹಸಿರಾಗಿ ಹೊಮ್ಮುವುದು ನೀರಿಗೇತಕೆ ಬಣ್ಣವಿಲ್ಲ? ಆಧುನಿಕತೆಯ ಭರದಲ್ಲಿ ಕಾರ್ಖಾನೆಗಳು ಉಗುಳುವ ವಿಷ ಗಾಳಿಗೆ ಬಿಗಿದಪ್ಪಿ ಸುಟ್ಟು ಕಪ್ಪಾದ ನೀರು ನೀರಿಗೇತಕೆ ಬಣ್ಣವಿಲ್ಲ? ನಗರೀಕರಣದ ಕೊಳಕಿನೊಂದಿಗೆ ಮೋರೆಯ ಸೇರಿ, ಹಳಸಿ ಪಡೆಯುವದಿಲ್ಲವೆ ಬೇಡದ ಬಣ್ಣ ನಿಜ, ನೀರು ವರ್ಣರಹಿತ ಕಾಪಾಡಿದರೆ ಪರಿಸರ, ಸಾಧ್ಯ ಸುಂದರ ಬಣ್ಣವೂ ಸಹಿತ; ತಪ್ಪಿದರೆ, ಬಯಲಾಗುವದು ಶುದ್ಧ ನೀರಿನ ಅಭಾವದ ಬಣ್ಣ! ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತವರಿನ ಮುತ್ತು ರೇಮಾಸಂ ಡಾ.ರೇಣುಕಾತಾಯಿ.ಸಂತಬಾ ಮರೀಯಲಿ ಹ್ಯಾಂಗ ಮರೀ ಅಂದರ ಅವ್ವನ ಅರಮನೆಯ ಅಂತಃಪುರವ ತವರಿನ ಗಂಜಿಯು ಅಮೃತದ ಕಲಶವು ಅಕ್ಕರೆಯು ಅಚ್ಚಿನ ಬೆಲ್ಲವ ಮೆಲ್ಲದಂಗ// ತವರಿನ ಉಡುಗೊರೆ ಆಗೇನಿ ನಾನು ಅತ್ತೆಯ ಮನೆಗೆ ಮುತ್ತಾಗಿ ಬಂದೇನಿ ಕಟ್ಟ್ಯಾರ ಕಂಕಣವ ಕೂಡು ಬಾಳ್ವೆಗೆ ಹಾದಿಗೆ ಹರವ್ಯಾರ ಹವಳದ ಹೂವ// ತಾಯಂಗ ತಡದೇನ ಕಂಟಕದ ಕದನವ ಅಪ್ಪನಂಗ ತಪ್ಪಿಲ್ಲದ ಹೆಜ್ಜೆನ ಇಟ್ಟೇನಿ ನುಡಿದಂಗ ನೇರ ನಡೆ ನಡದೇನಿ ಮಾತನ್ಯಾಗ ಮಂದ್ಯಾಗೆಲ್ಲ ಹೌದಾಗೇನಿ// ಬಂಗಾರದಂತ ನನ್ನ ಅಣ್ಣರ ತಮ್ಮರ ಬಳುವಳಿಯಾಗಿ ಬಂದೇನಿ ಬಂಧುರದ/ ಬಳಗದಾಗೆಲ್ಲರ ಬಾಯಾಗ ಬೆಣ್ಣಿಯಾಗೇನಿ/ ಬಂದೇನಿ ಮುತ್ತಾಗಿ ಮಾಲೆಯ ಕಟ್ಟಲು// ಹ್ಯಾಂಗರ ತೀರಿಸಲಿ ತವರಿನ ಋಣವ ಅವ್ವ ಅಪ್ಪನ ಮಮತೆಯ ಬೆಳಕನ ಅಣ್ಣ ತಮ್ಮರ ಒಲವಿನ ಹೊಳೆಯನು ಸಾವಿರ ಜನುಮಕು ಋಣವ ತೀರಿಸಲಾರೆ// *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಅವನಿಗಾಗಿ ಕಾದ ಕಣ್ಣ ನೋಟ ಮಬ್ಬಾಗಿದೆ ಸಖಿ ಅವನಿಲ್ಲದೇ ಯಾವ ಹಬ್ಬವೂ ಬೇಡವಾಗಿದೆ ಸಖಿ ವಚನ ಮೀರದವ ಇಂದು ವಚನ ಮೀರಿದನೇಕೋ ಮಿಲನವಿಲ್ಲದ ಯಮುನೆ ತಟ ಭಣಗುಡುತಿದೆ ಸಖಿ ಒಮ್ಮೆಗೇ ಬಂದು ಪರಿಪರಿಯಾಗಿ ಕಾಡುವ ಅವನು ರಾಸಲೀಲೆಯಿಲ್ಲದ ಬಾಳು ನೀರಸಗೊಂಡಿದೆ ಸಖಿ ಸುತ್ತಲಿನ ಗಾಳಿಯೂ ಅವನ ಬರುವಿಕೆ ಸೂಚಿಸುತ್ತಿಲ್ಲ ಸೊಲ್ಲಿಲ್ಲದೇ ನಗುವಿಲ್ಲದೇ ಮನ ಮಸಣವಾಗಿದೆ ಸಖಿ ತೊರೆದು ಹೋದ ಶ್ಯಾಮ ಮತ್ತೆ ಬರುವನೇ ಹೇಳು ಅವನಿರದೇ ಸಾವೇ ಹಿತವಾಗಿ ಹತ್ತಿರ ಸೆಳೆದಿದೆ ಸಖಿ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಮುಕ್ತ ಅಮೃತಮತಿ ಲಕ್ಷ್ಮೀ ಪಾಟೀಲ ಅಂಗ ಸೌಷ್ಠವದ ಬಾಹ್ಯ ಸೌಂದರ್ಯ ರಾಜ ವರ್ಚಸ್ಸು ವಜ್ರ ವೈಡೂರ್ಯ ಭೋಗ ಭಾಗ್ಯಗಳ ನಿವಾಳಿಸಿ ಅಂತರಂಗ ಬೇಟಕೆ ಮನವ ಬೀಳಿಸಿ ಬಿಗಿ ಮೌನ ಮುರಿದು ಮಾತಾಗಲು ನಡೆದೆ ಪಂಜರದ ಅರಗಿಳಿಗೆ ಮಾತು ಕಲಿಸಿದ್ದೂ ಮರೆತು, ಕಾಡ ಕೋಗಿಲೆ ಕರೆಗೆ ವಸಂತ ಕೂಟಕೆ ನಡೆದೆ ಬೇಟ ಕೂಟಕೆ ಮನವ ಮಿಡಿಸಿ ಶರತ್ತುಗಳಿಲ್ಲದೆ ಪ್ರೀತಿ ಕೊಡಲು ಮೈ ಬೆವರ ಬಸಿದು ಸೋನೆ ಸುಯ್ಯಲು ಬಿಡುವಿಲ್ಲದೆ ನಡೆದೆ, ಭಾವ ಕೂಟಕೆನಡೆದೆ,,, ಅಗ್ನಿ ದಿವ್ಯದ ದಾರಿಗೆ ಅಗ್ನಿ ಮಳೆಯಾದರೂ ಸಾಕಿದ ಗಂಡಿನ ಕ್ರೌರ್ಯಕೆ ನಲುಗಿದೆ ರಾಗ ಭಾವದೊಳು ಲಯವಾಗಲು ನಡೆದೆ ಅಮೃತಧಾರೆ ಎದೆಗವಚಿ ನಡೆದೆ,,, ಇಂಪಾದ ಕೊರಳ ಮೆದು ಬೆರಳ ಸ್ಪರ್ಶದಲಿ ಪ್ರೀತಿ ಕಾಮನೆಗಳ ಕಟೆದಂತೆ ಭಗ್ನಶಿಲ್ಪ ಕನಸುಗಳಿಗೆ ಅಮೃತ ಹನಿಸಿ ಅರಮನೆಯ ಕಣ್ಣಕೆಂಪಿಗೆ ನಂಜೇರಿಸಿ ಲೋಕದೆಲ್ಲೆಗೆ ವಿಷವಾಗಲು ನಡೆದೆ ಸುರಂಗದಾರಿಯಲ್ಲಿ ಮಲ್ಲಿಗೆಮನವಾಗಿನಡೆದೆ ಭಾವಮೇಳದಲಿ ನಾಟ್ಯವಾಡಲು ನಡೆದೆ ಬಿಡುವಿಲ್ಲದೆ ನಡೆದೆ ಭಾವ ಕೂಟಕೆ ನಡೆದೆ,,, ಅಂತರಂಗ ಅರಳಿಸಲು ಅಮೃತ ನರಳಿಸಲದು ವಿಷ ಕಾಲಕರ್ಮವಿಧಿಗಳನ್ನು ಬೆರಗಾಗಿಸಿ ಷರಾ ಹೊಡೆದು ನಡೆದೆ ವಿಷ ಮಥಿಸಿ ಕಕ್ಕಿಸಿ, ಎದೆಯಲ್ಲಿ ಇಳಿಸಿದರು ಗುಂಡುಗಳ ಭಾರ, ನಿನ್ನ ಬೆತ್ತಲೆ ಬರೆದು ತಮ್ಮಬೆತ್ತಲೆ ಮರೆತು , ಯಶೋಧರನ ಯಶೋದುಂದುಭಿ ಹಾಡಿ ನಿನ್ನ ಬೆಂತರ ಮಾಡಿದರು ಅವರ ಗಂಡುಗಳಿಗಿಲ್ಲಿ ಮುಕ್ತಿಸಾಲು ಈಗಲೂಸಂಕಟದಲಿ ಕುದಿವ ಅಮೃತಮತಿನೀನು,ಅತೃಪ್ತಪ್ರೇತಗಳುನಾವು ಯಶೋಧರರ ಪರಮಾಧಿಕಾರ ದಾಟಲು ಅಷ್ಟಾವಕ್ರರ ಅಸಹನೆ ಅಳಿಯಲು ನಡದಲ್ಲೆಲ್ಲ ಅಹಂ ಮೂರ್ಖತೆಗೆ ತಲೆ ತಿರುಗಿಸಿ ಬದುಕಿದ್ದೇವೆ ಅಮೃತಮತಿ ನಾವೂ ನಿನ್ನಂತೆ ನಿನ್ನೊಳಗಿನ ಉಸಿರಂತೆ ಅಷ್ಟಾವಕ್ರರ ಚಕ್ರಬಂಧ, ಯಶೋದುಂಧುಭಿಗಳ ಷರಾ ಎಲ್ಲ ಬಾಹುಗಳ ಬಿಗಿತದಲಿ ಹಣ್ಣಾದರೂ ನಿಂತಿದ್ದೇವೆ ಅಮೃತಮತಿ ನಿನ್ನ ಮರೆಯದೆ !ನಿನ್ನ ಹೆಜ್ಜೆಗಳಲಿ ನಮ್ಮ ಅಸ್ಮಿತೆಯ ಅಗೆಯಲು,,, ಒಡೆಯ ಒಕ್ಕಲು, ಹೆಣ್ಣು ಗಂಡು ಸುಂದರ ಕುರೂಪ, ನೀತಿ ನಿಷ್ಟುರಗಳ ಬೆಂಕಿಬಂಧ ನಡೆದಿದ್ದೇವೆ ದಾಟಲು ನಮ್ಮ ದಾರಿಯ ಗುರಿಗೆ ಶ್ರದ್ದೆಗಳ ತಳಕು ಕಟ್ಟಿದವರ ಕೈಗಿತ್ತು ಗೌರವದ ಸೀರೆ ತಲೆಗೆ, ಪಾವಿತ್ರ್ಯದಕಲಶ ಕೊಟ್ಟವರಿಗೇ ಎತ್ತಿಟ್ಟು, ಸೆರಗು ಸೀರೆಯಾಚೆ ನಗ್ನರಾಗಿದ್ದೇವೆ. ಲಕ್ಶ್ಮಣರೇಖೆಗಳನ್ನು ದಾಟಿಯೇ ಬದುಕುವ ಹಮ್ಮಿಗೆ. ನಾವೂ ನಡೆದಿದ್ದೇವೆ ಅಮೃತಮತಿ ನಮ್ಮದೇ ಹೆಜ್ಜೆಯ ನಡಿಗೆ,,, ಪ್ರೀತಿಯ ಘಾತುಕವರಿತರೂ ಪ್ರಿತಿಸಿದೆ ಆಳ ಅಳೆಯಲು ಪ್ರೀತಿಯ ಇಣುಕಿದೆ ಆಳಕ್ಕಿಳಿದು ಒಂಟಿಯಾದರೂ ಪ್ರೀತಿಯ ತಬ್ಬಿದೆ ‘ಪ್ರೀತಿಗೆ ಸ್ವಾತಂತ್ರ್ಯವೇ ಪ್ರೀತಿ ಎಂದು ಸಾರಿದೆ ಮುಕ್ತಿಗೆ ದೂರಾದೆ ನೆಲಕೆ ಹತ್ತಿರವಾದೆ ನೆಲದ ಘಮವಾಗಿ ಬಂಡಾಯದಕೂಗಾದೆ ಹೆಣ್ಣುಗಳ ಸುಪ್ತಲೋಕಕೆ ಇಳಿದು ಈ ನೆಲದಲ್ಲೇ ಉಳಿವ ಪ್ರೀತಿಬೇರಾದೆ ಮುಕ್ತದಾರಿಗೆ ಶಕ್ತರೂಪಿಣಿ ಅಮುಕ್ತ ಅಮೃತಮತಿಯಾದೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ಮಹಾಮಾರಿಯ ಬಲಿ ಕಂಡು ಎದೆಗೆ ಬೆಂಕಿ ಇಟ್ಟಂತಾಗಿದೆ ಎಲ್ಲರ ಕೈಮೀರುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ನನ್ನ ದೌರ್ಬಲ್ಯಗಳನ್ನು ಖಚಿತ ಪಡಿಸಿಕೊಂಡು ನನ್ನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿರುವೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಹಳೆಯದಾದರೂ ಮರೆಯಾಗುತ್ತಿಲ್ಲ ಹೆಚ್ಚುತ್ತಿದೆ ನೋವು ಮನ ನೆನಪಿಸುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಅಂದಿನ ಅನ್ನವನ್ನು ಅಂದೇ ಗಳಿಸುವ ಜನ ನಾವು ಗೃಹಬಂಧನದಿ ಹೊಟ್ಟೆ ಹೊರೆದುಕೊಳ್ಳುವದ್ಹೇಗೆಂದು ಎದೆಗೆ ಇಟ್ಟಂತಾಗಿದೆ ಅತಿಯಾದ ಸ್ವಾರ್ಥವನೆಂದಿಗೂ ನಾನು ಯೋಚಿಸಿಲ್ಲ ‘ಚೆಲುವೆ’ ಈ ಅನೀರಿಕ್ಷಿತತೆಯ ಮಾತು ಎದೆಗೆ ಬೆಂಕಿ ಇಟ್ಟಂತಾಗಿದೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಂಬಲಿಸಿರುವೆ ಶಿವಲೀಲಾ ಹುಣಸಗಿ ನಿನ್ನ ಮೇಲೊಂದು ಮುನಿಸಿದೆ ಕಾರಣ ಹೇಳಲ್ಲ ಚಿಂತಿಸೊಮ್ಮೆ.! ಕನಿಕರಿಸದ ಇರುಳುಗಳೆಲ್ಲ ಉರುಳುಗಳಾಗಿ ಬೆಸೆದಿವೆ..! ಮಬ್ಬಿನಲೊಂದು ನಿಟ್ಟುಸಿರು ತುಟಿಯಂಚಿನಲೊಂದು ಹಸಿಯಾದ ಮೌನದುಸಿರು.! ಕಾಡಿಗೆಯ ಕರಿನೆರಳು.. ಕಮರಿದಾ ಪುಷ್ಪದಂತೆ ರತಿ ಉರಿದು ಭಸ್ಮವಾದಂತೆ..! ಕಪ್ಪುಛಾಯೆಯ ಬಿಂಕನಾನೊಲ್ಲೇ ಮಡುಗಟ್ಟಿದ ಒಡಲುನನ್ನಲ್ಲೇ ನಿನ್ನುಸಿರ ಅಪ್ಪುಗೆಯಲಿ ಬಿಗಿದು ಮುತ್ತಿನಾ ಮಳೆಯ ಸುರಿದ ಬಾರದೇ ನನಗಿನ್ನೇನೂ ಬೇಕಿಲ್ಲ..ನಲ್ಲಾ.. ನಿನ್ನ ಹಿಡಿ ಪ್ರೀತಿಯ ಹೊರತು…! ನಿನ್ನೊಟಕೆ ಹುಸಿಗೋಪ ಮರೆವೆನು ಮರುಗಿದಾಗೆಲ್ಲ ಕನವರಿಕೆಗಳು ಮೊಳಕೆಯೋಡಯದ ಕನಸುಗಳು ನಿಟ್ಟೂಸಿರು ಬಿಡದಾ ಕಂಗಳು..! ನೀ ನೀಡಿದ ಉದರಾಗ್ನಿಯಲಿ ಬೆಂದು- ಬಸವಳಿದಿರುವೆ ಚಿರನಿದ್ರೆಗೆ ಜಾರುವ ಗಳಿಗೆಯಲಿ ಮನದ ಪ್ರತಿಬಿಂಬವಾಗ ಬಾರದೆ….? ಮುನಿಸಾದರೂ ನನ್ನೊಳಗೆ ಮನಸಾದರೆ ನಾ ನಿನ್ನೊಳಗೆ ಹೃದಯವನರಿಯೆಂದು ಪರಿತಪಿಸಿರುವೆ. ಪ್ರೀತಿಗಾಗಿ ಹಗಲಿರುಳು ಹಂಬಲಿಸಿರುವೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಕ್ಕಳ ಕವಿತೆ ಆಸೆ ಮಲಿಕಜಾನ ಶೇಖ ಆಕಾಶಕ್ಕೆ ಹಾರುವ ಆಸೆ ರೆಕ್ಕೆಗಳಿಲ್ಲದೆ ಹಾರುವದ್ಹೇಗೆ..? ಗರುಡನೆ ಗರುಡನೆ ಕೇಳಿಲ್ಲಿ ನಿನ್ನಯ ರೆಕ್ಕೆ ಕೊಡು ಎನಗೆ.. ಮುದ್ದಿನ ಬಾಲಕ ಕೇಳಲೆ ನೀನು ರೆಕ್ಕೆಗಳೇನು ಕೊಡುವೆನು ನಾನು ಛಲವಿಲ್ಲದನೆ ಹಾರುವದ್ಹೇಗೆ..? ರೆಕ್ಕೆಗಳಂತು ಚಿಟ್ಟೆಗೆವುಂಟು..! ಸಾಗರದಾಚೆ ಈಜುವ ಆಸೆ ಕಿವಿರುಗಳಿಲ್ಲದೆ ಈಜುವದ್ಹೇಗೆ..? ಮೀನವೆ ಮೀನವೆ ಕೇಳಿಲ್ಲಿ ನಿನ್ನಯ ಕಿವಿರು ಕೊಡು ಎನಗೆ.. ಪುಟ್ಟನೆ ಪುಟಾಣಿ ಕೇಳಲೆ ನೀನು ಕಿವಿರುಗಳೇನು ಕೊಡುವೇನು ನಾನು ತಾಳ್ಮೇಯ ಇಲ್ಲದೆ ಈಜುವದ್ಹೇಗೆ..? ಕಿವಿರುಗಳಂತು ಚಿಪ್ಪೆಗೆವುಂಟು..! ಗುಬ್ಬಿಯ ಗೂಡನು ಕಟ್ಟುವ ಆಸೆ ಕೊಕ್ಕವನಿಲ್ಲದೆ ಕಟ್ಟವದ್ಹೇಗೆ..? ಗುಬ್ಬಿ ಗುಬ್ಬಿ ಕೇಳಿಲ್ಲಿ ನಿನ್ನಯ ಕೊಕ್ಕು ಕೊಡು ಎನಗೆ.. ಚಿಣ್ಣರ ಚಿಣ್ಣಾ ಕೇಳಲೆ ನೀನು ಕೊಕ್ಕವನೇನು ಕೊಡುವೇನು ನಾನು ಬುದ್ಧಿಯ ಇಲ್ಲದೆ ಕಟ್ಟುವದ್ಹೇಗೆ..? ಕೊಕ್ಕಗಳಂತು ಕಾಗೆಗೆವುಂಟು..! ವೇಗದಿ ನನಗೆ ಓಡುವ ಆಸೆ ಕಾಲಲಿ ವೇಗ ಇಲ್ಲದ್ಹೇಗೆ..? ಜಿಂಕೆ ಜಿಂಕೆ ಕೇಳಿಲ್ಲಿ ನಿನ್ನಯ ಕಾಲು ಕೊಡು ಎನಗೆ.. ಅಂದದ ಕಂದಾ ಕೇಳಲೆ ನೀನು ಕಾಲುಗಳೇನು ಕೊಡುವೇನು ನಾನು ಜೋಶ್ ಇಲ್ಲದ ಓಡುವದ್ಹೇಗೆ..? ಕಾಲುಗಳಂತು ಆಮೆಗೆವುಂಟು..! ಮಧುರದಿ ಗಾನವ ಗುನುವ ಆಸೆ ಅಂದದ ಕಂಠವ ಇಲ್ಲದ್ಹೇಗೆ..? ಕೋಗಿಲೆ ಕೋಗಿಲೆ ಕೇಳಿಲ್ಲಿ ನಿನ್ನಯ ಕಂಠವ ಕೊಡು ಎನಗೆ.. ಪುಟಾಣಿ ಕಂದಾ ಕೇಳಲೆ ನೀನು ಕಂಠವನೇನು ಕೊಡುವೇನು ನಿನಗೆ ರಾಗವ ಇಲ್ಲದೆ ಹಾಡುವದ್ಹೇಗೆ..? ಕಂಠವೇನು ಗೂಬೆಗೆವುಂಟು..! ನೂರಾರು ವರ್ಷ ಬದುಕುವ ಆಸೆ ಜೀವಕೆ ಆಯುಷ್ಯ ಇಲ್ಲದ್ಹೇಗೆ..? ಆಮೆ ಆಮೆ ಕೇಳಿಲ್ಲಿ ನಿನ್ನಯ ಜೀವ ಕೊಡು ಎನಗೆ.. ಜಾಣರ ಜಾನ್ ಕೇಳಲೆ ನೀನು ಬೇಡುವದನ್ನು ಬಿಡುವಲೆ ನೀನು ನಿನ್ನಯ ಒಳಗೆ ಅಣುಕಿಸು ನೀನು ಎಲ್ಲವುವುಂಟು ನಿನ್ನಲ್ಲಿ..! ಅರಿತು ಬಾಳುವದನ್ನು ಕಲಿ ಮೊದಲು… *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

‘ಪ್ರಶ್ನೆ ದಾಳ’ ವಸುಂಧರಾ ಕದಲೂರು.  ಎಳೆ ಹುಡುಗನನ್ನು ಮಲೆ ಮೇಲೆ ಕೂರಿಸಿ ಆತ, ಮೊಲೆ ಕಾಣಬಾರದೆಂದು ಬಿಡುತ್ತಾರೆ ! ಹತ್ತಲು ೧೮ ಏಕೆ ..? ಉತ್ತರವಿಲ್ಲದವರ ಬಳಿ ಇಂತಹ ಪ್ರಶ್ನೆ ಕೇಳಬಾರದು. ಎರಡೊಂಬತ್ತಲಿ ಹದಿನೆಂಟೆಂದು ಒಂದು ಗರ್ಭಾವಧಿಯ ಅವಧಿಯ ಮರೆತು ಬಿಡುತ್ತಾರೆ. ಬೀಜ ನಾಟಿ, ಬೇರು ಚಿಗುರಿ ಹೂವೋ ಕಾಯೋ ಅರಳಿಕೊಳಲು ಒಂದ್ಹೊಂಬತ್ತು. ಹೊಟ್ಟೆ ಮಗುಚಿ ಅಂಬೆಗಾಲಿರಿಸಿ, ಬಾಯ ತೊದಲು ಶುರುವಿಗೆ ಇನ್ನೊಂದು ಒಂಬತ್ತು. . ಆಯಿತಲ್ಲ ಹದಿನೆಂಟು..! ಪ್ರತೀ ಪ್ರಶ್ನೆಗೂ ಒಂದು ಉತ್ತರವಿದೆ ಒಪ್ಪಿತವಾದರೆ. ಆದರೂ ತನ್ನ ಮಗುವ ತಾನೇ ಕಾಣಬಾರದೇಕೆನುವ ಉತ್ತರವಿರದ ಒಂದು ‘ಪ್ರಶ್ನೆ ದಾಳ’ ಮರಳಿ ಉರುಳಿ ಉರುಳಿ, ತಾಯ ಹೃದಯ ನರಳಿದೆ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಿಶ್ವಗುರು ಬಸವಣ್ಣ ತೇಜಾವತಿ ಹೆಚ್. ಡಿ ನೀನೇ ಅಲ್ಲವೇ ಮಹಾಮಾನವತಾವಾದಿ ಹನ್ನೆರಡನೆಯ ಶತಮಾನದ ಕ್ರಾಂತಿಯೋಗಿ ಅದೆಷ್ಟೋ ಅಂಧಕಾರದ ಧೂಳುಹಿಡಿದ ಮನಗಳಲಿ ಅರಿವಿನ ಪ್ರಣತಿಯ ಬೆಳಗಿದೆ ! ಹುಟ್ಟುಬ್ರಾಹ್ಮಣ ಸಂಸ್ಕಾರಶರಣ ಅಂಧಶ್ರದ್ಧೆ ಜಡ ಸಂಪ್ರದಾಯ ತೊರೆದು ಸತ್ಯಾನ್ವೇಷಕನಾದೆ ! ಅಂತರ್ಜಾತಿ ವಿವಾಹ ಮಾಡಿಸಿ ಬಿಜ್ಜಳನಾಸ್ಥಾನ ಮಂತ್ರಿ ನೀನು ಗಡೀಪಾರಿಗೀಡಾದೆ! ಸಮಾಜ ಸುಧಾರಕನಾದೆ ಕಾಯಕವೇ ಕೈಲಾಸವೆಂದೆ ನುಡಿದಂತೆ ನಡೆಯೆಂದೆ ಅಂತರಂಗಶುದ್ಧಿಯೇ ಮಿಗಿಲೆಂದೆ ಜ್ಞಾನವೇ ಬಂಢಾರವೆಂದು ನೀ ಭಕ್ತಿ ಬಂಢಾರಿಯಾದೆ ! ಆಚಾರವೇ ಸ್ವರ್ಗವೆಂದೆ ಅನಾಚಾರವೇ ನರಕವೆಂದೆ ಅನುಭವ ಮಂಟಪದೊಳು ಮಹಾಜ್ಞಾನಿಯಾದೆ ! ಇಷ್ಟಲಿಂಗ ಪರಿಕಲ್ಪನೆಯೊಂದಿಗೆ ಜಗಜ್ಯೋತಿಯಾದೆ ! ಕೂಡಲಸಂಗಮ ವಚನಾಂಕಿತದಿ ನೀ ನಿಜಶರಣನಾದೆ…. ನಿಜ….ಶರಣನಾದೆ… *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಸವಣ್ಣ ಡಾ.ಪ್ರಸನ್ನ ಹೆಗಡೆ ಅಣ್ಣ ಬಸವಣ್ಣನೆಂದರೆ ಬಿಜ್ಜಳ ಮಂತ್ರಿಯೊಂದೇ ಅಲ್ಲ ಸಾವಿರದ ಬೀಜ ಬಿತ್ತಿದ ಮಹಾ ಮಂತ್ರ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೆ ವಚನಕಾರನಲ್ಲ ಹೊಸ ವಿಚಾರ ಸೃಜಿಸಿದ ವಿವೇಕ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಶಿವಶರಣನಲ್ಲ ಶಿವ ಚರಣ ಮುಟ್ಟದಾ ವಿಶ್ವ ಮೂರ್ತಿ ಅಣ್ಣ ಬಸವಣ್ಣನೆಂದರೆ ವಿಚಾರವಾದಿಯೊಂದೇ ಅಲ್ಲ ಶಿಷ್ಟಾಚಾರ ಪಾಲಿಸಿದ ಇಷ್ಟ ಮೂರ್ತಿ ಅಣ್ಣ ಬಸವಣ್ಣನೆಂದರೆ ಬರೇ ಲಿಂಗ ಪಿಡಿದವನಲ್ಲ ಲಿಂಗವನ್ನೇ ಮೆಚ್ಚಿಸಿದ ಜ್ಞಾನ ಮೂರ್ತಿ ಅಣ್ಣ ಬಸವಣ್ಣನೆಂದರೆ ಜ್ಞಾನ ಸಾಗರವಷ್ಟೇ ಅಲ್ಲ ಸರ್ವರನೂ ಕ್ಷಮಿಸಿದ ಕ್ಷಮಾ ಮೂರ್ತಿ. *******

ಕಾವ್ಯಯಾನ Read Post »

You cannot copy content of this page