ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
“ಬಿಡದ ನಂಟು”


ನನಗೂ ನಿನಗೂ ಎಷ್ಟೊಂದು ನಂಟು
ಬಿಡದ ಬಾಂಧವ್ಯಕ್ಕೆ ಬೆಸೆದ ಗಂಟು
ನನಗೀಗ ವಯಸ್ಸು ಐವತ್ತು
ಅರವತ್ತಕ್ಕೆ ಅರಳು ಮರಳು
ಆಗಿಲ್ಲ ಬಿಡು
ತೆರೆದ ಕಂಗಳಲ್ಲಿ ದಿನವೂ ಓದುವೆ
ಅದು ಬಿಡುವು ಇದ್ದಾಗ
ನೀನೋ ಮೌನ
ಎಲ್ಲವನ್ನೂ ಓದಿ ಅರ್ಥೈಸಿಕೊಂಡು
ಸಾಗಬೇಕು ಹೊತ್ತಿಗೆ
ಅದೆಷ್ಟು ನಿನಗೆ ಕುತೂಹಲ
ನನಗೂ ಕೂಡಾ
ಕ್ಷಣ ಹೊತ್ತು ಕೈಯಲ್ಲಿ ಅಗಲಿದರೆ ಸಾಕು
ಹುಡುಕಾಟ ಜೀವ ಹೋದಂತೆ
ಭಯ ಬೇರೆ
ಎಲ್ಲವನ್ನೂ ಹಿಡಿದಿಟ್ಟಿರುವ
ಹೆಸರು ಅವರ ನಂಬರು
ಯಾವಾಗಲೋ ಒಮ್ಮೆ ಅಗಲಿ
ಮರೆಯಾಗಿದ್ದೆ ನೋಡು
ನನ್ನ ಫಜಿತಿ
ಕರೆಗಳ ಮೇಲೆ ಕರೆ
ಎಲ್ಲಿರ್ರಿ ?ಮೆಡಂ
ಏನ್ ಇದು ?ಎತ್ತುದೇ ಇಲ್ಲ ನೋಡ್ರಿ !
ಮೆಸೆಜ್ ನೋಡಲಾಕ್ ಆಗುದಿಲ್ಲ ಎನ್ರಿ? ನಾವ್ ನಿಮಗ್ ಕರೆ ಮಾಡಿ
ತಿಳಿಸಬೇಕ್ ಎನ್ರಿ ?
ಒಂಚೂರು ನಿಮಗ್ ಬುದ್ಧಿ ಇಲ್ಲ ಏನ್ರೀ ?
ನೋಡಿ ಅದೆಷ್ಟು ನನಗೂ ನಿನಗೂ ಬಿಟ್ಟಿರಲಾರದ ನಂಟು
ಬೆಸೆದುಕೊಂಡು ಬಿಟ್ಟಿದೆ ಅಂಟು
ನಮ್ಮ ಮನಿಯಾಗ ನಮ್ಮ ಅವ್ವ ಒಂದು ಸಲ ಬೈದು
ಕೊಳ್ಳಾಗ ಗಂಟು ಹಾಕೋಂಡ್ ಬಿಡು
ಇಪ್ಪತ್ನಾಲ್ಕು ತಾಸು ಬರೀ ಕೈಯ್ಯಾಗ ಬೇಕು ನಿನಗ
ಜನರಾದರೂ ಏನಾಂದರು?
ಅದಕ್ಕಂತಲೇ
ಹೆಸರ್ ಬಂದಿರಬೇಕ್ ನೋಡ್ರಿ
ಜಂಗಮವಾಣಿ
ಬಾಳ್ ಶ್ಯಾನಾಕಿರೀ ನಮ್ಮ ಜಂಗಮವಾಣಿ
ತಡ್ರಿ ಮತ್ ಒಂದು ಕರೆ ಬಂತು
ಎತ್ತ ಲಿಲ್ಲ ಅಂದ್ರ ಕಾಲ ಕೆದರಿ
ಜಗಳಕ್ಕ ಬಂದಾರು
ಹುಷಾರ್ ರೀ !ನನ್ನಂಗ ಆಗಬ್ಯಾಡ್ರಿ
ಬುದ್ಧಿ ಐತೋ ಇಲ್ಲೋ ಅಂತಾರಿ..
ಡಾ ಸಾವಿತ್ರಿ ಕಮಲಾಪೂರ



