ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆ ಹೊಯ್ದ ವರುಣ
ಸೂರ್ಯನ ಕಳಿಸಿದ
ಹಸಿಯಾದ ಭೂಮಿಯು
ಹದವಾಗಿದೆನೆಂದ?

ಬಿಸಿ ಕೊಟ್ಟ ರವಿಯು
ಹೂವು ಅರಳಿಸಿದ
ಸಂಜೆ ಹೊತ್ತಾಗುತಾ
ತಾನೇ ನಾಚಿ ಕೆಂಪಾದ.

ಮಳೆ ಸುರಿಸಿ ಬಾನು
ಇಳೆಗೆ ಇಣುಕಿತು
ಚಿಗುರೊಡೆದ ಭೂಮಿ
ಧನ್ಯವಾದ ಹೇಳಿತು.

ಹುಲುಸಾದ ಭೂಮಿಗೆ
ಸಂಕ್ರಾಂತಿಯೇ ಸೀಮಂತ
ಸಲಹುವ ಭೂತಾಯಿ
ಕಕ್ಕುಲಾತಿ ಹೃದಯಿ.

ಕೀಟವ ತಿಂದ ಹಕ್ಕಿ
ಬೆಳೆಯ ರಕ್ಷಿಸಿತು
ಮಾಗಿದ ತೆನೆ ತುಂಬಿ
ಮೃಷ್ಟಾನ್ನಪಡೆಯಿತು.

ಬೆವರು ಸುರಿಸುತ
ಕಷ್ಟಪಡೋ ರೈತನು
ಸಾಲ-ಶೂಲವಾದರೂ
ಅನ್ನ ಕೊಡೋ ದಾತನು.


About The Author

Leave a Reply

You cannot copy content of this page

Scroll to Top