ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂಡಣದ ಬಾನಲಿ
 ಹೊನ್ನ ಕಿರಣವ ಸೂಸುವ
ಉದಿಸಿತೊಂದು ತಾರೆ,
ಅಂಬಿಕಾ ತನಯರಾಗಿ,
ಅರವಿಂದರ ತತ್ವದೊಳು,
ರವೀಂದ್ರರ ಕಾವ್ಯದಲಿ
ಮಿಂದು ಪುನೀತರಾದರಂದು,

ಶಬ್ಧಗಾರುಡಿಗಾನಾಗಿ,
ಮಾತು ಮಾತು ಮಥಿಸಿ,
ನಾದವ ಝೇಂಕರಿಸುತ
ಅಕ್ಕರದ ಅಕ್ಕರೆಯ
 ಪದವ ಹೊಸೆಯುತ ,
ಶಬ್ಧ ನಿಶ್ಶಬ್ಧಗಳ ಜೊತೆ
ಆಡಿ, ಹಾಡಿ, ಕುಣಿದು, ನಲಿಸಿದಾತ,
ಹೃದಯಗವ್ವರದೊಳು
ಒಲವ ಹಣತೆಯ ಬೆಳಗಿಸಿ,
ಒಳಗಣ್ಣ ತೆರಸಿ ಅಂತಃಕರಣದ
ಕದವ ತಟ್ಟಿ ಎಬ್ಬಿಸಿದಾತ
ಬದುಕು ಹಿಡಿಗಾಳಿನಂತಿರಲಿ
ಬಿಡಿಗಾಳಿನಂತೆ ಬಿಡಿಯಾಗದಿರಲಿ
ಸರಸದೊಂದಿಗೆ ಸೇರಿ
ವಿರಸವ ತೊರೆದು
ಸಮರಸದ ಬದುಕನು
ಜಗಕೆ ತಿಳಿಸಿದಾತ ವಿಧಾತ.


About The Author

Leave a Reply

You cannot copy content of this page

Scroll to Top