ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿ.ಎಡ್‌ ಪಯಣ ಶುರುವಾಯಿತು ಕನಸಿನ ಹೆಜ್ಜೆಯಿಂದ;
ಹೃದಯದಲಿ ಹೊತ್ತಿದ ಬೆಳಕಿನ ಮಿಂಚ, ಪ್ರಜ್ಞೆಯ ತೇಜದಿಂದ.

ಪಾಠವೊಂದು ಕಲಿಯುವಾಗ, ಮನದಲಿ ಹುಟ್ಟಿತು ಪ್ರಶ್ನೆ:
“ಗುರು” ಎನ್ನುವ ಹೆಸರಿನ ಅರ್ಥವೇನೆಂದು ಹುಡುಕಿದೆ ದೀರ್ಘ ಪಥದಲ್ಲಿ.

ಮಕ್ಕಳ ನಗೆಯಲಿ ಕಂಡೆ ದೇವರ ಮುಖದ ಸೌಂದರ್ಯ;
ಅವರ ಹೃದಯ ಗೆಲ್ಲುವದು, ನಿಜವಾಗಿ ಶ್ರಮದ ಪರಾಕಾಷ್ಠೆ!

ತರಗತಿಯ ಫಲಕ ನನ್ನ ಕಥೆ ಬರೆದ ಪುಸ್ತಕವಾಯಿತು;
ಪ್ರತಿ ಪಾಠವೂ ಜೀವನದ ಪಾಠವಾಗಿ ಬದಲಾಯಿತು.

ಯೋಜನೆ, ಪ್ರಾತ್ಯಕ್ಷಿಕೆ, ಅನುಭವಗಳ ಸಾಗರ;
ಮಗುಚಿದ ಹಾದಿಯಲಿ ಸಿಕ್ಕಿತು ಹೊಸ ಅಧ್ಯಾಯದ ಅಗಾಧ ಅರಿವು.

ತಪ್ಪುಗಳಿಂದ ಕಲಿತು, ನಗೆಯಿಂದ ಮುಂದುವರಿದ ಪಯಣ;
ಗುರುತ್ವದ ಭಾವನೆಯಲಿ ತುಂಬಿ ಹೋಯಿತು ತನುಮನ.

ಇಂದು ನಾನು ಹೇಳುವ ವಿಶ್ವಾಸದ ನುಡಿ:
“ಗುರುವು ಜ್ಞಾನದ ಸೇವಕ, ಅವನು ಜೀವನದ ಪಾಲಕ.”

———–

About The Author

Leave a Reply

You cannot copy content of this page

Scroll to Top