ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನರಕ ಈಗ ಖಾಲಿ
ಖಾಲಿ
ಬಿಕೋ ಎನ್ನುತ್ತಿದೆ
ಯಮನ ಆಸ್ಥಾನ
ಅಲ್ಲಿಯ ರಕ್ಕಸರಿಗೆ ಈಗ
ರಜೆ ಸಿಕ್ಕಿದೆಯಂತೆ
ಅವರೆಲ್ಲ ಇಲ್ಲಿ
ಸಂಸತ್ತು ವಿಧಾನ ಸಭೆಯ
ಚರ್ಚೆಯಲ್ಲಿ ಮುಳುಗಿದ್ದಾರೆ
ಇಲ್ಲಿನ ವೈದ್ಯರು ಇಂಜನೀಯರ್
ಕಂಟ್ರಾಕ್ಟರ್
 ಬಂಡವಾಳಶಾಹಿಗಳು
ಕ್ರೂರ ಸುಲಿಗೆ ಶೋಷಣೆ
ಹಪ್ತಾ ವಸೂಲಿ
ಮಾಡುತ್ತಿದ್ದಾರೆ
ಸಬ್ ಕೆ ಸಾಥ್
ಸಬ್ ಕಾ ವಿಕಾಸ
ವರ್ಷಕ್ಕೊಮ್ಮೆ
 ಧ್ವಜ ಹಾರಿಸುವ ನಾವು
ರಾಷ್ಟ್ರ ಭಕ್ತರು
ನರಕವೀಗ ಸ್ವಚ ಸರಳ
ಭೂಮಿಯ ತುಂಬೆಲ್ಲಾ
ನರಕದ ಅಂಗಡಿಗಳು
ನಿತ್ಯ ನಿರಂತರ
ವ್ಯಾಪಾರ ನಡೆಸಿವೆ
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

1 thought on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ನರಕ ಈಗ ಖಾಲಿ””

Leave a Reply

You cannot copy content of this page

Scroll to Top