ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮತ್ತೆ ಎದ್ದಿದೆ
ಕಪ್ಪು ನೆಲದಲಿ
ಹೊಸ ಕೂಗು
ಹೊಸ ಬದುಕಿಗೆ
ಹೊಸ ಕನಸಿಗೆ
ಬುದ್ಧ ನಡೆ
ಬಸವ ಪಡೆ
ಭೀಮ ಸೇನೆ
ಮುನ್ನುಗ್ಗುತಿವೆ
ಕ್ರಾಂತಿ ಕಹಳೆ
ಮೊಳಗಿದೆ

ಸತ್ಯ ಸಮತೆ
ಶಾಂತಿ ಪ್ರೀತಿ
ಭರವಸೆ ನಾಡಿಗೆ
ಸರ್ವರಿಗೆ ಸಮಪಾಲು
ಸರ್ವರಿಗೆ ಸಮಬಾಳು
ಆಗದಿರಲಿ ಘೋಷಣೆ
ಹಸಿವು ಬಡತನ
ಮೋಸ ವಂಚನೆ
ಕೊನೆಗೊಳ್ಳಲಿ ಶೋಷಣೆ

ಗುಡುಗುತಿವೆ ಗುಡಿಸಲು
ನಡುಕು ಹುಟ್ಟಿದೆ
ಸಂಸತ್ತಿನಲ್ಲಿ
ತಲೆ ಬಾಗಿ ನಮಿಸಬೇಕು
ಸಂವಿಧಾನ ಮೌಲ್ಯಕೆ
ವಚನ ಶಾಸ್ತ್ರ ಸಾರಕೆ
ತೊಲಗಬೇಕು
ಜಾತಿ ಮತ ವರ್ಣ ವರ್ಗ
ಮನುಜ ಮತ ವಿಶ್ವ ಪಥ
ಸಮ ಸಮಾಜದ ಪಥ
ಬುದ್ಧ ಬಸವರ ರಥ


About The Author

3 thoughts on “ಡಾ. ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ “ಮತ್ತೆ ಎದ್ದಿದೆ””

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಕ್ರಾಂತಿ ಕಹಳೆ ಕವಿತೆ

Leave a Reply

You cannot copy content of this page

Scroll to Top