ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸುತ್ತ ಕತ್ತಲಾಗಿದೆ ಚಂದ್ರ,ತಾರೆಗಳೇ ಬೆಳಕ ಬೀರಬೇಕಿದೆ
ಗಮ್ಯದ ಗುರುತಿಲ್ಲ ಮೈಲಿಗಲ್ಲೇ ದಾರಿಯ ತೋರಬೇಕಿದೆ

ಈ ಬಾಳ ದಾರಿ ನಡೆದಷ್ಟು ಗೋರಿಗೆ ಸಮೀಪವಾಗುತ್ತಿದೆ
ಕಾಲ ಕರೆದಾಗ ಮರು ಮಾತಿರದೇ ಮಸಣ ಸೇರಬೇಕಿದೆ

ಒಂದೇ ತೆರನಿಲ್ಲವೀಗ ಹಿಂದು,ಇಂದು,ಮುಂದುಗಳೆಲ್ಲವು
ಬದಲಾವಣೆ ಜಗದ ನಿಯಮವೆಂಬ ಸತ್ಯವ ಸಾರಬೇಕಿದೆ

ಹಣಕ್ಕಿಂತ ಗುಣದ ದಾರಿದ್ರ್ಯವೀಗ ಬಹುತೇಕ ಹೆಚ್ಚಾಗಿದೆ
ಸುಳ್ಳಿನ ಸೋಗಿನೊಳಗೆ ಹಾಳು ಮೂತಿಯ ತೂರಬೇಕಿದೆ

ಹಗಲುಗನಸು ಕಂಡಿರುವ ಕುಂಬಾರನಿಗೀಗ ದಿಗಿಲಾಗಿದೆ
ಮೂರು ಬಿಟ್ಟವರಿಗೆ ಮನುಷ್ಯತ್ವದ ಸರಕು ಮಾರಬೇಕಿದೆ


About The Author

Leave a Reply

You cannot copy content of this page

Scroll to Top