ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಾಗ್ದೇವಿಯ ಶಬ್ಧ ಭಂಡಾರದ
ಮುದ್ರೆಯೊಡೆದ ರನ್ನ
ಗದಾಯುದ್ಧ ಕಥಾ ಪ್ರಸಂಗ
ಓದಲೆನಿತು ಚೆನ್ನ

ಸೌಮ್ಯ ಸಂವತ್ಸರದ ಶುಭಗಳಿಗೆ
ಇಸವಿ ಒಂಬೈನೂರ ನಲವತ್ತೊಂಬತ್ತು
ಜಿನವಲ್ಲಭ ಅಬ್ಬಲಬ್ಬೆಗೆ
ದೊರೆತ ಭುವನ ಭಾಗ್ಯ ಸಂಪತ್ತು

ಜಂಬುಖಂಡಿ ಮುದುವೊಳಲ್
ಬೆಳುಗಲಿಯ ರನ್ನಮಯ
ಸಾರಸ್ವತ ಲೋಕ ಬೆಳಗಿದ
ಕವಿತಿಲಕ ಮಹನೀಯ

ದಿವ್ಯಪ್ರಭೆಯ ಜ್ಞಾನಸೂರ್ಯ
ಗುರು ಅಜಿತಸೇನಾಚಾರ್ಯ
ಆಶ್ರಯವಿತ್ತು ಬೆಂಬಲಿಸಿದ
ಕರುಣಾಳು ಚಾವುಂಡರಾಯ

ಸಾಹಸಭೀಮ ವಿಜಯ ಕೃತಿ
ಸುಂದರ ಲೌಕಿಕ ಚಂಪೂಕಾವ್ಯ
ಭೀಮ-ದುರ್ಯೋಧನರ ಸಮರಾಂಗಣ
ಚಿತ್ರಿಸಿರುವ ದೃಶ್ಯ ಕಾವ್ಯ

ದೃಡಬಾಹು ರೇಚಣ ಮಾರಯ್ಯ
ಒಡಹುಟ್ಟಿದ ಸಹೋದರರು
ಬಾಳಪಥದಿ ಜೊತೆಗೂಡಿದ
ಜಕ್ಕಿ- ಶಾಂತಿ ಮಡದಿಯರು

ರಾಯ ಮತ್ತು ಅಬ್ಬೆ ಇವರು
ಕರುಳ ಬಳ್ಳಿ ಕುಡಿಗಳು
ದಾನ ಚಿಂತಾಮಣಿ ಅತ್ತಿಮಬ್ಬೆ
ಮಾತೃ ಹೃದಯಿ ಬೆಳದಿಂಗಳು

ಕವಿಚಕ್ರವರ್ತಿ ಕಾವ್ಯ ಕುಸುರಿ
ತಾಯಿ ಶಾರದೆ ಮುಡಿಗೆ ಸಿಂಗಾರ
ಸೂರ್ಯ ಚಂದ್ರ ಇರುವ ತನಕ
ಕವಿಮುಖಚಂದ್ರ ಅಜರಾಮರ


About The Author

Leave a Reply

You cannot copy content of this page

Scroll to Top