ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಂಜಾನೆಗೆ ಮುನಸಿ ಹೋದವನು
ಮಧ್ಯಾಹ್ನವಾದರೂ ಅವನ ಸುಳಿವಿಲ್ಲ
ಮಾತಿನ ಮಿಂಚಿಗೆ ಕಿಡಿಕಿಡಿ ಆದವನು
ಹೊತ್ತು ಏರಿದರು ಮತ್ತೆ ಆತ ಬರಲಿಲ್ಲ.

ವಾದಕ್ಕೆ ಬಿದ್ದ ಮನಸುಗೆಳೆರಡು ದೂರ
ಆದೀತೆ ಎಲ್ಲವೂ ನಿನ್ನ ಮೂಗಿನ ನೇರ
ಸಿಟ್ಟಿನಲ್ಲಿ ಬಂದ ಮಾತು ಬಲು ಜೋರ
ಒಟ್ಟಿನಲ್ಲಿ ಸಂಗಾತಿ ಮನಸು ಚೂರ್ಚೂರ

ಬಾಗಿಲದಾಟಿ ಅಂಗಳಕ್ಕೆ ಬಂದು ನಿಂತೇನಿ
ತುದಿ ಓಣಿವರಗೂ ಕಣ್ಣಾಡಿ ಅವಂದೇ ಧ್ಯಾನ
ಬಿಸಿರೊಟ್ಟಿ ಬೇಳೆಕಾಳು ಮಾಡಿ ಕುಂತೀನಿ
ಬಂದು ಉಣಬಾರದೆ ಜೀವಕ್ಕೆ ಸಮಾಧಾನ

ಹೊತ್ತು ಕಳೆಯದೆ ಜಡವಾಗಿ ನಿಂತಂತೆ
ಬಿಸಿಲಿನ ಝಳ ಹೊರಹೊರಗೆ ಉರಿದಾವು
ಮತ್ತೆ ನೆನಪಿನಲಿ ಉರಳಿದ ಹನಿ ಚಿಂತೆ
ಹಸಿವು ಹಂಬಲಕೋ ಕಣ್ಣೀರು ಸುರಿದಾವು

ಕಂಬಕ್ಕೆ ಒರಗಿ ಕಾದು ಸಾಕೆನಿಸಿ ಕುಂತಾಗ
ಬಿತ್ತೊಂದು ನೆರಳು ಮುಂದೆ ಕೈ ಸರಿದು
ಮುಖವೆತ್ತೆ ನೋಡಿದರೆ ಆತನೇ ನಿಂತಾಗ
ಹಿಡಿದ ಮಲ್ಲಿಗೆ ಹಸ್ತ ಬಿಡಿಸಿ ನಗೆ ಸುರಿದು

ಹಟವಾದ ಜಗಳ ಮಂಜಿನಂತೆ ಕರಗಿತು
ಮುನಿಸಿಹೋದವನು ಮನ್ನಿಸಿ ಬಂದನು
ದಿಟವಾಗಿ ಪ್ರೀತಿ ಗೆದ್ದು ಹಸಿರು ಚಿಗುರಿತು
ಬಾಡಿದ ಮುಖಕೆ ಹೊಸ ಹುರುಪುತಂದನು.

About The Author

Leave a Reply

You cannot copy content of this page

Scroll to Top