ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತನ್ನಿಂದ ತಪ್ಪಾದಾಗ
ತಾ ವಕೀಲನಾಗುವ
ಪರರ ತಪ್ಪೆನಿಸೆ
ನ್ಯಾಯಾಧೀಶನಾಗುವ.

“ನನ್ಗೆ ಗೊತ್ತಿದೆ” ಎಂದು
ಬೇರೆಯವರಿಗೆಲ್ಲ
ಗೊತ್ತಾಗಬಾರದೆಂದೇ
ಗೊತ್ತಿಲ್ಲದಂತಿರೋದು.

ಅರಿತಿರುವ ನೀನು
ಅವರಿವರ ಮುಂದೆ
ಅರಿವಿರದ ಹಾಗೆ-
-ಇರುವುದೇ ಅರಿವು.

ಬರೀ ಒಳ್ಳೆಯವರ
ಗೆಳೆತನ ಅಸಾಧ್ಯ,
ಒಳ್ಳೆಯ ಗುಣಗಳ
ಹೆಕ್ಕುವುದು ಸಾಧ್ಯ.

ಗುಡಿಸಲಲ್ಲಾಗಲಿ
ಬಂಗಲೆಯೇ ಇರಲಿ
ಒಂಟಿತನದ ಬಾಳು
ಸಹಿರಿಸದ ಗೋಳು.

ನೇಮಿಸಲು ಬಹುದು
ಎಲ್ಲ ಸೇವೆಗಳಿಗೆ
ನೇಮಿಸಲು ಅಸಾಧ್ಯ
ನರಳಲು ಸಾಯಲು.

About The Author

Leave a Reply

You cannot copy content of this page

Scroll to Top