ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನಸು ಕಣ್ಣಿಗೆ ಬಡತನ ಅಡ್ಡಿಯಾಗದು
ಸಾಧಿಸುವ ಛಲವಿರೆ ಜಯವು ನಿನ್ನದು

ಸಾಧಕರ ಜೀವನವೇ ಕಣ್ಣ ಮುಂದಿಹುದು
ವಿಜಯಮಾಲೆ ಕೈ ಬೀಸಿ ಕರೆಯುತಿಹುದು

ವಿದ್ಯೆಯೆಂದಿಗೂ ಛಲಗಾರನಿಗೆ ಒಲಿವುದು
ಆಲಸಿಯ ಅರಮನೆಯಲಿ ಜ್ಞಾನ ನಿಲ್ಲಲಾರದದು

ಜ್ಞಾನವು ಬಡತನ ಸಿರಿತನವನೆಂದು ನೋಡದು
ವಿನಯಶೀಲನಿಗೆ ಶಾರದೆಯ ಕೃಪೆಯಿಹುದು

ಸಾಧನೆಯ ಹಾದಿಗೆ ಕಲ್ಲು ಮುಳ್ಳು ಸಹಜವದು
ಆತ್ಮವಿಶ್ವಾಸವಿರಲು ಗುರಿ ಸುಗಮವದು

ಕನಸು ಕನ್ನಡಿಯ ಗಂಟಾಗಬಾರದು
ನನಸಾಗಲು ಪರಿಶ್ರಮವನೆಂದು ಬಿಡಬಾರದು


About The Author

3 thoughts on “ಮಧುಮಾಲತಿರುದ್ರೇಶ್ಅವರ ಕವಿತೆ “ಸಾಧನೆʼʼ”

Leave a Reply

You cannot copy content of this page

Scroll to Top