ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಾಹಿತ್ಯ ಸಮ್ಮೇಳನ
ದೊಡ್ಡ ಶಾಮಿಯಾನ
ಝಗ ಮಗಿಸುವ
ಲೈಟು ಬೆಳಕು
ಮೈಕಿನ ಕಿರುಚಾಟ
ಮೈಕಿನ ಮುಂದೆ
ಶುದ್ಧ
ನರ ಸಂಹಾರಿ
ಶಾಖೆಹಾರಿ ಭಾಷಣ.
ವೇಷಧಾರಿಗಳ ಕುಣಿತ
ಡೊಳ್ಳು ವಾದ್ಯ ಬಡಿತ
ಅಕ್ಷರ ಜಾತ್ರೆ
ಶಬ್ದಗಳ ಸಂಭ್ರಮ
ಬಂದವರ ಮಾತು
ಉಂಡು ಸಾಗುವ
ಕೊಂಡು ಹೋಗುವ
ಭಂಡರ ಸಂತೆ
ಬಾಡೂಟಕೆ ಸಂಪು
ಭರ್ಜರಿ ಊಟ
ಕನ್ನಡ ಉಳಿಸ ಬನ್ನಿ
ಸಂಜೆ ಮಂತ್ರಿಯ ಕರೆ
ಟಿವಿ ಪತ್ರಿಕೆ
ಮಾಧ್ಯಮದವರ ಹಬ್ಬ
ಮೂಲೆಯಲ್ಲಿ
ಸೊರಗುವ ಪುಸ್ತಕ
ಸಾಯದೆ ಕೈ ಕಟ್ಟಿ
ನಿಂತ ಲೇಖಕ ಪ್ರಕಾಶಕ
ಮಾಡಿ ಮುಗಿಸುವರು
ಸಾಹಿತ್ಯ ಯಾತ್ರೆ
ಮೊದಲಿನಂತೆ
ಬದಲಾಗಿಲ್ಲ
ಬದಲಾಗುವುದಿಲ್ಲ
ಬಡವಾಯಿತು ಕನ್ನಡ


About The Author

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಸಾಹಿತ್ಯ ಸಮ್ಮೇಳನ”

  1. ನಿಜ ಸರ್ , ಕನ್ನಡ ಸೊರಗುತಿದೆ
    ಕನ್ನಡದವರು ಎಚ್ಚೆತ್ತುಕೊಳ್ಳಬೇಕು

    ಅಕ್ಕಮಹಾದೇವಿ

  2. ಸಾಹಿತ್ಯ ಸಮ್ಮೇಳನದ ವಿಡಂಬಾನತ್ಮಕ ಕವನ ವಾಸ್ತವಕ್ಕೆ ಹಿಡಿದ ಕೈಗನ್ನಡಿ

    ಸುತೇಜ

Leave a Reply

You cannot copy content of this page

Scroll to Top