ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಸಂತ ಕಾಲ ನನ್ನೇ ನಾ ಮರೆವೆ
ರಾಷ್ಟ್ರಕವಿಯು ಕುವೆಂಪು ತಾನೆ
ಪ್ರಕೃತಿ ಕವಿತೆ ಬರೆದ ನಾಡಪ್ರೇಮಿ
ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಯ
ಹೇಗೆ ನಾನು ಮರೆಯಲಿ

ಕವಿಯೇ ನಿನ್ನ ಕವಿತೆಯಲ್ಲಿ
ವಿಶ್ವಮಾನವ ಸಂದೇಶ ಇರುವಲಿ
ಅಂಕುಶದ ಹಂಗಿಲ್ಲದೆ ಜಗಕೆ ಬೆಳಕಾದ
ವಿಶ್ವ ಚೇತನ ರಾಷ್ಟ್ರ ಕವಿಯ
ಹೇಗೆ ನಾನು ಮರೆಯಲಿ

ಮಳೆಯ ಗಾಲದ ದಟ್ಟ ಅನುಭವ
ಕಟ್ಟಿ ಬರೆದರು ಕಥೆಗಳಲ್ಲಿ
ಮಲೆನಾಡಿನ ಜನರ ಜೀವನ ಕಣ್ಣ ಮುಂದೆ
ತೇಲಿ ಬರುತಲಿ ಕಾನೂರು ಕವಿಯ
ಕವಿಯ ಹೇಗೆ ನಾನು ಮರೆಯಲಿ

ದೃಶ್ಯ ಕಾವ್ಯ ಬಿರುಗಾಳಿ ರಮ್ಯ ನಾಟಕ
ಬೆರಳ್ಗೆ ಕೊರಳ್ ರಕ್ತಾಕ್ಷಿ ರುದ್ರನಾಟಕ
ಪುರಾಣ ಕಾವ್ಯ ರಾಮಾಯಣ ದರ್ಶನಂ
ಭಾಗ್ಯ ನೀಡಿದ ಸೃಷ್ಟಿ ಚೈತನ್ಯ ಕವಿಯ
ಹೇಗೆ ನಾನು ಮರೆಯಲಿ
_————————————————

About The Author

Leave a Reply

You cannot copy content of this page

Scroll to Top