ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೊಳಲೂದಿದಾಗ ಪ್ರೇಮಕಾಶ್ಮೀರಕ್ಕೆ
ಕರೆದಳು ಕಲಾಸುಂದರಿ
ಪಕ್ಷಿಕಾಶಿಯೊಳಗೆ ಕಿಂಕಿಣಿಯಾಗಿ
ಮೆರೆದಳು ಕಲಾಸುಂದರಿ

ನವಿಲಿನಂತೆ ಷೋಡಶಿಯ ರೂಪದಲ್ಲಿ
ಕುಣಿದಳಲ್ಲ ಈಕೆ
ಇಕ್ಷುಗಂಗೋತ್ರಿಯಲ್ಲಿ ಮಂತ್ರಾಕ್ಷತೆ
ಸುರಿದಳು ಕಲಾಸುಂದರಿ

ಅನಿಕೇತನದಿ ಅನುತ್ತರದ ಕಥನ
ಕವನವ ಹಾಡಲೆಯಿಲ್ಲ
ಜೇನಾಗುವಾಯೆಂದು ಕೃತ್ತಿಕೆಯಾಗಿ
ಹರಿದಳು ಕಲಾಸುಂದರಿ

ಪಾಂಚಜನ್ಯ ಮೊಳಗಿಸಿ ಚಂದ್ರಮಂಚಕೆ
ಬಾ ಚಕೋರಿ
ಹೊನ್ನಹೊತ್ತಾರೆ ಸಮಯದಿ ನಲ್ಲನನು
ಬೆರೆದಳು ಕಲಾಸುಂದರಿ

ಮಲೆಗಳಲ್ಲಿ ಮಧುಮಗಳಾಗಿ ಬಂದಳಲ್ಲ
ಅಭಿನವ
ಕಾನೂರು ಹೆಗ್ಗಡತಿಯ ಕನಸುಗಳನು
ತೆರೆದಳು ಕಲಾಸುಂದರಿ


About The Author

2 thoughts on “ಕುವೆಂಪುರವರ ಕೃತಿಗಳ ಗಝಲ್-ಶಂಕರಾನಂದ ಹೆಬ್ಬಾಳ”

  1. ಗಜಲ್ ಚೆನ್ನಾಗಿದೆ.

    ಮಲೆಗಳಲ್ಲಿ ಮದುಮಗಳು ಅಂತ ಆಗಬೇಕು.

Leave a Reply

You cannot copy content of this page

Scroll to Top