ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅರಮನೆಯ ಸಿಂಹಾಸನದ ರಾಣಿಯ ಸ್ಥಾನ ಪಡೆಯಲಿಲ್ಲ
ಅನುರಾಗದಿ ಕಳೆದ ಸುಂದರ ದಿನಗಳ ನೆನಪು ಮರೆಯಲಿಲ್ಲ

ನಿತ್ಯ ರವಿಯ ಕುಲುಮೆಯಲಿ ಬೆಂದ ತನು ಹರಿಸಿತು ಬೆವರಿನ ನದಿ
ಬಾಳ ಬೇಗೆ ಕಳೆಯಲು ಬೆಳದಿಂಗಳ ಇರುಳಲಿ ಅಲೆಯಲಿಲ್ಲ

ಬೆಸೆದ ಭಾವಗಳ ಎದೆಯಲಿ ಅರಳಿದವು ಚಂದದ ಕನಸುಗಳು
ಒಂದಾದ ಈ ಮನಗಳಿಗೆ ಅಧರ ಮುತ್ತುಗಳು ದೊರೆಯಲಿಲ್ಲ

ಲೋಕದ ತುಂಬ ಹಾರುತಿವೆ ಬಣ್ಣದ ಬಾವುಟಗಳು ರೋಷದಿ
ಜಗವು ನಮ್ಮ ನಿರ್ಮಲ ಪ್ರೀತಿಯ ಆಳವನು ಅಳೆಯಲಿಲ್ಲ

ಬೆಳಕಿಲ್ಲದ ಹಾದಿಯಲಿ ಕುಲಕುತ ಸಾಗಿದೆ ಜೀವನ ಬಂಡಿ
ಚಂದ್ರ”ಪ್ರಭೆ”ಯ ನಿಸ್ವಾರ್ಥ ಕಾಂತಿಯಲಿ ಬದುಕು ಹೊಳೆಯಲಿಲ್ಲ


About The Author

Leave a Reply

You cannot copy content of this page

Scroll to Top