ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೆಲವರು ಬೊಬ್ಬಿಟ್ಟು ಕೂಗಿ ಹೇಳುವರು
ಕೆಲವೊಮ್ಮೆ ಮೌನವೇ ಮನದ ಕದ ತೆರೆಯುವುದು
ಕೆಲವರು ಮಾತುಗಳಲ್ಲಿ ಹೇಳಿಕೊಂಡರೆ
ಕಣ್ಣೀರು ಕೆಲವರ ದುಃಖವ ಹೊರಹೊಮ್ಮುವುದು
ಕಳೆಗುಂದಿದ ಮುಖ ಕೆಲವರ ಭಾವ ಕನ್ನಡಿಯಾದರೆ
ಕೆಲವರ ಕಣ್ಣಡಿಯ ಕಪ್ಪು ವಲಯ ಅವರ
ದುಗುಡವ ಬಿಚ್ಚಿಡುವುದು
ನಾವೇನೋ ಹೇಳಿಬಿಡುವೆವು
ಇಲ್ಲ ಮರೆಮಾಚುವ ಯತ್ನದಲ್ಲಿರುವೆವು
ಆದರೆ ಎಂದಿಗೂ ಮನಸಿನ ಭಾರವ ಸಂಪೂರ್ಣವಾಗಿ ತೆರೆದಿಡೆವು
ಎಲ್ಲೋ ಮನದಾಳದಿ ಕೊರಗು ಎಲ್ಲರಲ್ಲೂ ಇರುವುದು
ರಾತ್ರಿಯ ನಿದ್ದೆಯ ಕೆಡಿಸುವುದು
ದಿನದ ನೆಮ್ಮದಿಯ ಕಸಿಯುವುದು
ಹತ್ತಿಕ್ಕಿದರೆ ಹತಾಶೆಯ ರೂಪವಾಗುವುದು
ಹದ್ದು ಮೀರಿದರೆ ಸಂತುಲನ ತಪ್ಪುವುದು
ಈ ಬದುಕು ಯಾರನ್ನು ಬಿಡದು ಮಿತ್ರ
ನನ್ನನ್ನು ನಿನ್ನನ್ನು ಎನ್ನದೆ ಹೆಚ್ಚುಕಮ್ಮಿ
ಎಲ್ಲರನ್ನು ಕಾಡದೆ ಇರದು
ತಾಳುತ ಬಾಳುವ ಜೀವನ ನಮ್ಮದು.


About The Author

1 thought on “ಶಾಲಿನಿ ಕೆಮ್ಮಣ್ಣು ಅವರ ಕವಿತೆ-ದುಗುಡ”

Leave a Reply

You cannot copy content of this page

Scroll to Top