ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನಸು ಹೊತ್ತ ಕಂಗಳಲಿ
ಮನದ ಹದಕೆ
ನನಸಿಗಾಗಿ ಹಾತೊರೆದು
ಭರವಸೆಯ ಬೀಜ ಬಿತ್ತಿ.

ಬರಡು ನೆಲಕೆ
ಕೊರಡು ಮನಕೆ
ಬುರುಡೆ ಪುರಾಣ ಬಿಟ್ಟು
ವಾಸ್ತವದ ನೆಲೆಗಟ್ಟಿನಲಿ.

ಹಸಿರು ಬಳುವಳಿಗೆ
ಬಸಿರು ಚಳುವಳಿಗೆ
ಕೊಸರುವುದನು ಹಿಮ್ಮೆಟ್ಟಿ
ಭ್ರಮೆಯ ತೆರೆ ಸರಿಸಲು.

ಜಂಜಾಟಕೆ ತಿಲಾಂಜಲಿ ನೀಡುತ .
ಕೊಳೆಯ ಕೊಚ್ಚಿ ಹೋಗಲು
ಭೋರ್ಗರೆವ ವರ್ಷನಿಗಾಗಿ
ಮತ್ತೆ ಮತ್ತೆ ಕಾಯುತ್ತೇನೆ.

ನೆತ್ತಿ ಸುಡುವುದನು
ಮುತ್ತಿ ಕುಕ್ಕುವುದು
ಹತ್ತಿಕ್ಕಿ ಸಾವರಿಸಲು
ಧುಮ್ಮಿಕ್ಕುವ ತೊರೆಯ ಕಾಣಲು.

ಮೈ ಮನ ಅರಳಿಸಲು
ಕೊರಳು ತುಂಬಿ
ನರಳುವುದನು ಬದಿಗಿರಿಸಿ
ಪ್ರತಿ ಫಲದ ಅಪೇಕ್ಷೆಯಲಿ.

ಚೈತ್ರ ತುಂಬಿಸಿ
ಮೈತ್ರಿ ಬದುಕಿಗೆ
ಸನ್ಮಿತ್ರನಿಗಾಗಿ ಕಾಯುತ್ತೇನೆ.

ಹಚ್ಚ ಹಸಿರಿನ ಬಯಕೆ ಹೊತ್ತು
ಕಚ್ಚುವುದನು ಬಿಸಾಡಿ
ಬಿಚ್ಚುವ ಹ್ಯಾರೈಕೆಯಲಿ
ಬೆಳಕು ತುಂಬುವ ದೀಪ ಧಾರೆಗೆ.


About The Author

1 thought on “ರೇಷ್ಮಾ ಕಂದಕೂರ ಅವರ ಕವಿತೆ-ಮಳೆಗೆ ಕಾಯುತ್ತೇನೆ”

Leave a Reply

You cannot copy content of this page

Scroll to Top