ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಧ್ಯರಾತ್ರಿ ಎದ್ದ ಬುದ್ಧನಿಗೆ
ಯಾರು ಜೊತೆಗೆ ಬರಲಿಲ್ಲ
ಜೊತೆಯಾರಿಲ್ಲ ಎಂಬುದರ ಚಿಂತೆಯೂ
ಅವರಿಗಿರಲಿಲ್ಲ

ಸಂತೋಷದ ನಿದ್ದೆಗೆ
ಜಾರಿದ ಮೂವರು ನಗುನಗುತಾ
ಮಲಗಿದ್ದರು
ಬೆಳಗಿನ ಸೂರ್ಯನ ಶುಭೋದಯಕ್ಕೆ

ಮಧ್ಯ ರಾತ್ರಿ
ಮನೆ ಬಾಗಿಲಿಗೆ ಬಂದ ಚಂದ್ರ
ಮಂದಹಾಸದ ಮುಖಕ್ಕೆ
ಬೆಳಕು ನೀಡಿ ಬುದ್ದನಷ್ಟೇ ಎಬ್ಬಿಸಿ
ಲೋಕದ ಕತ್ತಲೆಡೆಗೆ
ಕೈ ತೋರಿ ಹೊರಡು ಎಂದ

ನಿದ್ರೆಯು, ನಿಲ್ಲು ಬುದ್ಧ
ನಾನಿನ್ನು ಲೋಕದ ಜೊತೆಗಿರುವೆ

ಮಡದಿ ನಿನ್ನ ನಿನ್ನಾಸರೆಗೆ
ನಿದ್ರಿಸುತಿಹಳು,
ಮಗನು ರಾಜ್ಯ ವಿಸ್ತರಿಸುವ ಕನಸು ಕಾಣುತಿಹನು
ಧನಕನಕ ಆಭರಣ ತುಂಬಿದ ತಿಜೋರಿ
ಬಾಗಿಲು ತೆರೆದು ಫಳಫಳನೆ ಹೊಳೆದು
ಚಂದ್ರನಿಗೂ ಕಣ್ಣು ಕುಕ್ಕಿತು

ಆದರೆ ಲೋಕದ ಕತ್ತಲು
ಬುದ್ದನಿದ್ದೆಡೆ ಬಂದು ನಿಂತು ಬಾ ಎಂದಾಗ

ಮನೆಯಿಂದ ಹೊರಡುವ ಮುನ್ನ
ಹೆಂಡತಿ ಮಗನೊಂದಿಗೆ ಮಾತನಾಡಬೇಕೆಂದಿದ್ದ

ಹೋಗಿ ಬರುವೆ
ಎನ್ನುವಷ್ಟರಲ್ಲಿ, ಕಾವಲಿನವನಿದ್ದ ಬಾಗಿಲು ನೂಕಿ
ಸಾಕು ಹೊರಡು ಬುದ್ಧ
ಎಲ್ಲರೂ ನಿದ್ದೆಯಲ್ಲಿದ್ದರೆ
ನೀ ಜಗ ಉದ್ಧರಿಸಲು ಸಾಧ್ಯ
ಎಂದು ಶಕುನ ನುಡಿಯಿತು


About The Author

Leave a Reply

You cannot copy content of this page

Scroll to Top