ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮದಲ್ಲದರ ಜೊತೆ ಗುದ್ದಾಟ
ಸಲ್ಲದು,
ನಮ್ಮದೆನ್ನುವ ತನವ
ತೊರೆಯಲೂ ಬಾರದು.

ಶಾಂತಿಯ ಮಂದ ಪ್ರಭೆ
ತಾಕದಿರೋ ಕಾರ್ಗತ್ತಲಲಿ,
ಕ್ರಾಂತಿಯ ಕಾಂತಿಯೇ
ಮುನ್ನಡೆಸೋ ಶಕ್ತಿಯಾಗಲಿ.

ಕಠೋರ ಮುಳ್ಳಿನ
ನಡುವೆಯೂ ತಾನು
ಮೃದುತ್ವ ತಳೆದೇ ಗುಲಾಬಿ
ಅರಳುವುದು.

ಕಠಿಣ ಹೋರಾಟದ
ಫಲವಾಗಿಯೇ ನಾವು
ದಾಸ್ಯತ್ವದ ಮುಷ್ಠಿಯಿಂದ
ಸ್ವತಂತ್ರರಾಗಿಹೆವು.

ಘೋರವೆನಿಸಿದರು ಈ
ಕ್ರಾಂತಿಯ ಮುಖವು,
ಪರಿವರ್ತನೆಯೆಡೆಗಿನ ನವ
ಭಾಷ್ಯವು.


About The Author

Leave a Reply

You cannot copy content of this page

Scroll to Top