ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲ್-

ಹರಯ ಮನ

ಮೌನದಲ್ಲಿ ಬಚ್ಚಿಟ್ಟಿದ್ದ ಮಾತು
ಕಣ್ರೆಪ್ಪೆಯಲಿ ಅಡಗಿದ ಕನಸು
ತಣಿಸುತಿದೆ ಮನ ಏಕಾಂತದ
ಕಾಣದ ಒಲವಿನಲಿ

ರೆಕ್ಕೆ ಇಲ್ಲದ ಬದುಕಲಿ
ಕಾಣದಾಲೋಕವ ಕಾಣುವ ಹಂಬಲದಿ
ಕಾತರದಿ ಕಾಯುತಿದೆ ಮನ ಏಕಾಂತದಿ
ರೆಕ್ಕೆ ಕಟ್ಟುವರ್ಯಾರೆಂದು..?

ಭೂತ ಭವಿಷ್ಯದ ಚಿಂತೆಯ
ಲೆಕ್ಕ ಎಣಿಸುವ ಮನ
ಕೂಡಿ ಕಳೆಯುವ ಬದುಕಿಗೆ
ಏಕಾಂತದಿ ಹುಡುಕುತಿದೆ ಸೂತ್ರವ..

ಎದೆಗೂಡೊಳಗೆ ಅವಿತ ಅಮಿತ ಪ್ರೀತಿ
ಸಾಗರದಾಳವಾದಾಟಿ
ಸುನಾಮಿ ಅಲೆಗಳ ಮೀಟಿ
ಏಕಾಂತದಿ ಹುಡುಕುತಿದೆ ನವರಾಗ ಪ್ರೀತಿಯ…

ಮುಸ್ಸಂಜೆಯ ಕಿರಣ ಜಾರಿ
ರಾತ್ರಿಯ ವೇದಿಕೆಗೆ ಸಜ್ಜಾದ ಶಶಿ
ಹರೆಯದ ಮನದೊಳಗೆ ಭಾವ ಸೃಷ್ಟಿಸಿ
ಏಕಾಂತದ ಕತ್ತಲಲಿ ಹುಡುಕುತ್ತಿದೆ
ಕಾಯುವ ಒಡೆಯ ಯಾರೆಂದು….?

ಹರೆಯ ಮನದ ಭಾವ ನೂರಾರು
ಸೃಷ್ಟಿಯ ಸೊಬಗಲ್ಲಿ ಅರಳಿ
ಯಾವ ಹೃದಯದ ಮುಡಿಗೆಂದು
ಏಕಾಂತದ ಮನ ಕಾಪಿರಿಸಿ ಕಾಯುತಿದೆ
ಒಲವಿನರಸನ…..

———————-

ವಿಮಲಾರುಣ ಪಡ್ಡoಬೈಲ್

About The Author

Leave a Reply

You cannot copy content of this page

Scroll to Top