ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜೆ.ಎಲ್.ಲೀಲಾಮಹೇಶ್ವರ

ಹಸಿರೇ ಉಸಿರು

ಧರೆಯು ಸುಂದರಗೊಳ್ಳಲು ಕಾರಣವೇ
ಪ್ರಕೃತಿಯ ಹಸಿರು.
ಜೀವಸಂಕುಲ ಬದುಕಿರಲು ಬೇಕಿದೆ
ಹಸಿರೇ ಉಸಿರು.

ಪರಿಸರವ ನಾಶ ಮಾಡಿದರೆ
ಅದುವೇ ಪಾಪ,
ಮುಂದಿದೆ ಜಗಕೆ ಆಮ್ಲಜನಕ
ಕೊರತೆಯ ಶಾಪ.

ಜಾತಿ ಧರ್ಮ, ಬೇಧ ಭಾವವ ಮರೆತು
ಬೆಳೆದು ನಿಂತಿವೆ ಗಿಡ ಮರ,
ನಿರ್ಲಕ್ಷಿಸಿ ಗಿಡ ಮರ ಕಡಿದರೆ ಕಾದಿದೆ
ಮುಂದೆ ಘನಘೋರ ಬರ.

ಸೃಷ್ಟಿಯ ವೈವಿದ್ಯತೆಗಳಲಿ ಪ್ರಕೃತಿ
ಸೊಬಗೇ ಅದ್ಭುತ,
ಗಿಡಮರ ಕಡಿದರೇ ಕಾದಿದೆ ಭುವಿಗೆ
ಸುಡುವ ಬರಡು,

ಈ ಜಲ,ಈ ಕಾಡು,ಈ ವಾಯು
ಎಲ್ಲವೂ ಪ್ರಕೃತಿಯ ವರ,
ಅರಿತು ನಿಸ್ವಾರ್ಥದಿ ರಕ್ಷಿಸದಿದ್ದರೆ
ಪರಿತಪಿಸಬೇಕಿದೆ ನರ.

—————–

ಜೆ.ಎಲ್.ಲೀಲಾಮಹೇಶ್ವರ

About The Author

Leave a Reply

You cannot copy content of this page

Scroll to Top