ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಗಜಲ್

ಸತ್ಯ ಶಾಂತಿ ಅಹಿಂಸೆ ಆಯುಧಗಳ ಉಪಾಸಕ
ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ
ನಿತ್ಯ ಭಜನೆ ಉಪವಾಸ ಪ್ರಾರ್ಥನೆಯ ಆರಾಧಕ
ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ

ನಡೆದ ದಾರಿಯ ತುಂಬಾ ಹೆಜ್ಜೆ ಗುರುತು ಮೂಡಿಸಿ
ಸರಿದಾರಿ ತೋರಿದವನು
ತುಂಡು ಪಂಜೆ ಕೋಲು ಕಣ್ಣಿಗೊಂದು ಕನ್ನಡಕ
ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ

ಮೆಟ್ಟಿದ ಮೆಟ್ಟು ಸವೆಸುತ ಸ್ವಾತಂತ್ರ್ಯ ಮೆಟ್ಟಿದ ಆಳರಸರಮೆಟ್ಟಿ ನಿಂತವನು
ಸತ್ಯಾಗ್ರಹ ತ್ಯಾಗದ ಸವಿಫಲ ದಾಸ್ಯ ಮುಕ್ತಿಕಾರಕ
ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ

ನಟ್ಟಿರುಳಿನಲಿ ನಿರ್ಭೀತಳಾಗಿ ಒಂಟಿಯಾಗಿ ನಡೆವ ಹೆಣ್ಣಿನ ಸ್ವಾತಂತ್ರ್ಯದ ಕನಸು ಕಂಡವನು
ರಾಮರಾಜ್ಯದ ಕನಸು ನನಸಾಗಿಸಲು ಹೋರಾಡಿದ
ಜನನಾಯಕ ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ

ಜಾತಿ ಪಾತಿಯ ಪಾಚಿ ಬಾಚಿ ತೆಗೆಯುತ ಭಾರತಿಯ ಗರಿಮೆ ಪೊರೆದವನು
ಇಂದು ದ್ವೇಷವಾರಿಸಿ ಹೃದಯ ಬೆಳಗಿಸುವ ಸ್ಫೂರ್ತಿದಾಯಕ ಮಹಾತ್ಮನೆಂದರೆ ಅಷ್ಟೇ ಮತ್ತೇನಿಲ್ಲ


ಇಂದಿರಾ ಮೋಟೆಬೆನ್ನೂರ.

About The Author

Leave a Reply

You cannot copy content of this page

Scroll to Top