ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ-

ಗಜಲ್

ಬತ್ತಿದ ಕೆರೆಯಾಯಿತು ನೀ ಕೊಟ್ಟ ಪ್ರೀತಿ
ಬಾಡಿದ ಕುಸುಮಾಯಿತು ನೀ ಕೊಟ್ಟಪ್ರೀತಿ

ಕನಸಿನ ಗಾಜಿನರಮನೆ ಒಡೆದು ಹೋಯಿತೇ
ಮುರಿದ ಸಂಕವಾಯಿತು ನೀ ಕೊಟ್ಟ ಪ್ರೀತಿ

ತಾಳಲಾರದ ತಳಮಳವ ಒಡಲಲಿ ತಂದಿಟ್ಟೆ
ಚೆಲ್ಲಿದ ಕ್ಷೀರವಾಯಿತು ನೀ ಕೊಟ್ಟ ಪ್ರೀತಿ

ಹೃದಯದಲಿ ಪೀಠವಿಟ್ಟು ಪೂಜಿಸಿದ್ದೆ ಸಖ
ಸಾಗರದ ಜಲವಾಯಿತು ನೀ ಕೊಟ್ಟ ಪ್ರೀತಿ

ಒಳಗಿನ ದುಃಖವಿದು ಅಭಿನವನನು ಕಾಡೀತು
ಕಹಿಯಾದ ಖಾದ್ಯವಾಯಿತು ನೀ ಕೊಟ್ಟ ಪ್ರೀತಿ


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top