ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ಕರುನಾಡ ದೀಪ

ಕನ್ನಡದ ಸಂಸ್ಕಾರ ಅಂದ
ಕನ್ನಡದ ಸಂಸ್ಕೃತಿಯೆ ಚೆಂದ
ಜಗವೆಲ್ಲ ಬೆಳಗಿದ
ಕನ್ನಡದ ನುಡಿಗಳೇ ಮಕರಂದ

ತನುಮನ ತಣಿಸಿದ ಕನ್ನಡ
ಹಸಿರಾಗಿ ಉಸಿರಾದ ಕನ್ನಡ
ಕಸ್ತೂರಿ ಪರಿಮಳದ ಸಿರಿಗನ್ನಡ
ಕಾರುಣ್ಯ ಕಂಪು ಚೆಲುವಕನ್ನಡ

ಮ್ರೃದು ವಚನಗಳ ದೀವಿಗೆ ಕನ್ನಡ
ಜನಪದರ ಸೊಗಡಿನ ಸೊಬಗು ಕನ್ನಡ
ಕವಿ ಪುಂಗವರು ಪೋಷಿಸಿದ ಸಿರಿಗನ್ನಡ
ಸಾಧು ಸತ್ಪುರುಷರ ಮೆಟ್ಟಿದ ನೆಲಕನ್ನಡ

ವೀರ ಶೂರರಾಳಿದ ಚೆಲುವ ಕನ್ನಡ
ವೀರ ವನಿತೆಯರ ಕೆಚ್ಚೆದೆಯ ಕನ್ನಡ
ಕಾವೇರಿಯಿಂದ ಗೋದಾವರಿಗೆ ಬೆಳೆದ ಭವ್ಯತೆಯ ಭಾವೈಕ್ಯತೆಯ ಕನ್ನಡ

ಹರಿವ ನದಿಯಲಿ ಜುಳುಜುಳು ನಿನಾದ ಕನ್ನಡ
ಹಕ್ಕಿ ಪಕ್ಷಿಗಳ ಕುಹೂ ಕುಹೂ ಕಲರವ ಕನ್ನಡ
ಅಂಬಾ ಎನುವ ಕರುವಿನ ಕರೆ ಕನ್ನಡ
ಅಳುವ ಕಂದನ ನುಡಿ ಸ್ವರ ಕನ್ನಡ

ಕನ್ನಡ ನುಡಿಯ ತಾಯಿ ಗುಡಿಗೆ
ಗಡಿನಾಡೆ ಇರಲಿ ಹೊರನಾಡೆಇರಲಿ
ಬೇಧ ಭಾವ ಅಳಿಸಿ ಭಾವದೊಲುಮೆ ಬೆರಸಿ
ಕರುನಾಡ ದೀಪ ಬೆಳಗೋಣ ಬನ್ನಿ.


ಲಲಿತಾ ಪ್ರಭು ಅಂಗಡಿ

About The Author

Leave a Reply

You cannot copy content of this page

Scroll to Top