ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

ವಿಧಾಯದ ಕ್ಷಣಗಳಲಿ…

ಖುಷಿ ಖುಷಿಯಾಗಿ ಬದುಕನ್ನ
ಮುಗಿಸಿ ಬಿಡ ಬೇಕು
ಯಮನು ಬಂದಾಗ ನಗು
ನಗುತಾ ಎದ್ದು ನಿಲ್ಲ ಬೇಕು
ಸಾವಂತ ಸಾವು ನಮ್ಮ ಸಡಗರವ
ನೋಡಿ ನಾಚಿ ಕೊಳ್ಳಬೇಕು
ಇರುವಷ್ಟು ದಿನಗಳು
ಎಲ್ಲರೊಳಗೊಂದಾಗಿ ಬಾಳ ಬೇಕು
ಬೆಚ್ಚನೆಯ ಭಾವನೆಯ ಹಂಚ ಬೇಕು
ನೋವಿರಲಿ ನಲಿವಿರಲಿ
ಮುಂದೆ ಸಾಗುತಿರಬೇಕು
ಬಾಳಲ್ಲಿ ಸಿಹಿಯಾದ ಮಾತು
ತುಂಬಿ ಇರಬೇಕು
ಕಹಿಯಾದ ಭಾವನೆಯ
ಮರೆತು ಬಿಡ ಬೇಕು
ವಿಧಾಯದ ಕ್ಷಣಗಳಲಿ
ಸಂತೃಪ್ತಿಯ ಭಾವ ತುಂಬಿರಬೇಕು
ನಮ್ಮವರ ಕಣ್ಣಲ್ಲಿ ಅಗಳಿಕೆಯ
ನೋವು ಶಾಶ್ವತವಾಗಿ ತುಂಬಿರ ಬೇಕು


ನಾಗರಾಜ ಜಿ. ಎನ್. ಬಾಡ,

About The Author

Leave a Reply

You cannot copy content of this page

Scroll to Top