ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಸಂಗಾತಿ

ಯಾರಿಗೂ ಗೊತ್ತಿರದ
ನಿರ್ಜನ ಶಾಂತ ಪ್ರದೇಶ
ನಾನು ಆಗಾಗ ಅಲ್ಲಿಗೆ
ಒಬ್ಬನೇ ಹೋಗುತ್ತೇನೆ
ಸುತ್ತಲೂ ನಿಗೂಢ
ಕುಣಿವ ಮನದ ಉತ್ಸಾಹ
ಯಾರು ನೋಡದ
ಯಾರಿಗೂ ಎಟುಕದ
ಏಕಾಂತದ ನೆರಳು
ಸುರಕ್ಷಿತ ಕ್ಷೇಮ
ನನ್ನ ಇರುವು
ದೂರದ ನೆಲದ ಮೇಲೆ
ಯಾರೂ ಲೂಟಿ
ಹೊಡೆಯದ ಭದ್ರ
ನೆಲ ಜಲ ಮರಳು
ಸುಳಿಗಾಳಿ ಹೂ ಬಿಸಿಲು
ಏನೋ ವಿಚಿತ್ರ
ಇದು ದೈವ ಲೀಲೆ
ನಾನೊಬ್ಬನೇ ನಡೆದೆ
ಹೆಜ್ಜೆ ಗುರುತು ಬಿಡದೆ
ಹೊರಗೆಡುವಿದೆ ನಾನು
ನನ್ನ ಕಣ್ಣೀರು ಸಂತಸ
ನಗೆ.ನೆಮ್ಮದಿ ನನ್ನ ಸ್ವತ್ತು
ಅಲ್ಲಿಯೇ ಹೂತು ಬಿಟ್ಟೆ
ಭಯ ಭೀತಿ ವಿಷಾದ
ಎಲ್ಲವನ್ನೂ ತೂರಿಕೊಂಡೆ
ಭಾವಗಳು ನನ್ನ ಜೀವ
ಏಕಾಂಗಿ ನಾನು
ಹೊರಗೆ ಚಿಗುರು
ಮೇಲೆ ತುಂತುರು ಮಳೆ
ಖುಷಿ ಕ್ಷಣಗಳ ಕೂಡಿಡುವೆ
ಬಿರುಕು ಭೂಮಿಯಲ್ಲಿ
ಬಿತ್ತುವೆ ಕನಸುಗಳ
ಎಲ್ಲವೂ ಸಾಧ್ಯ
ಬಯಕೆ ಮೌನದಲಿ
ಬಿಕ್ಕುತ್ತವೆ ಬಳಲುತ್ತವೆ
ಸದ್ದು ಗದ್ದಲವಿಲ್ಲ
ನನ್ನ ನಗೆ.ನನ್ನ ಕಣ್ಣೀರು
ಹೊರಗೆ ಕಾಣುವದಿಲ್ಲ
ಕೇಳುವುದಿಲ್ಲ
ಎಲ್ಲವೂ ಶಾಂತ
ನಿಷ್ಪತ್ತಿ ತೇಜ
ನಾನು ಮತ್ತೆ ಕರೆಯುತ್ತೇನೆ
ನನ್ನ ಕನಸುಗಳ ಭಾವಗಳ

ನನ್ನ ಉಸಿರಿನ ಸಂಗಾತಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಸಂಗಾತಿ”

  1. ಹೃದಯ ಸ್ಪರ್ಶ ಕವನ ತುಂಬಾ ಚೆನ್ನಾಗಿ ಮೂಡಿ ಬಂದ ಭಾವ

Leave a Reply

You cannot copy content of this page

Scroll to Top