ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡ ರಾಜ್ಯೋತ್ಸವ ವಿಶೇಷ

ಜೆ.ಎಲ್.ಲೀಲಾಮಹೇಶ್ವರ

ನಾಡು ನುಡಿಯ ಉತ್ಸವ

ಮೊಗ್ಗರಳಿ ಹೂವಾಗಿವೆ
ನಾಡು ನುಡಿಯ ಉತ್ಸವಕೆ,
ಮೊಗ್ಗರಳಿ ನಸುನಗುತಿವೆ
ಕಲೆ ಸಾಹಿತ್ಯ ಸಂಸ್ಕಾರಕೆ.

ಜುಳು ಜುಳು ಇಳಿವ ಝರಿ ನಾಟ್ಯಕೆ,
ಸುರುಸುರುಳಿ ಸುಮ ತೇಲಿವೆ,
ಗಿರಿ ಬನ ನದಿಗಳಾಟ ನೋಟಕೆ,
ಉರುಉರುಳಿ ಸುಮ ನಲಿದಿವೆ.

ಇಂಪಿನುಲಿಗೆ ಕಂಪು ಮಿಲನ,
ತರು ಲತೆ ಬನ ಸಿರಿ ಚೇತನ,
ಹಸಿರು ಡೇರೆ ರಸದ ಮೌನ,
ಸೌರಭ ಸಿರಿ ಬನದ ಸಿಂಚನ.

ಮಲೆನಾಡ ಹಸಿರುಡುಗೆಯಲಿ
ಕೋಗಿಲೆಯಿಂಚರ ಸ್ವರಗಾನಕೆ,
ಬೆಳ್ಳುವಲ ಬಯಲ ಕಾರಂಜಿಯ
ಹಾವ ಭಾವ ನರ್ತನ ನಾದಕೆ.

ಖಗಗಳೊಡನೆ ಹೂವು ದುಂಬಿ,
ರೆಂಬೆ ಕೊಂಬೆ ಟಿಸಿಲ ತುಂಬಿ,
ಪರಿಮಳದಿ ಬಿರಿದು ಹೂವರಳಿವೆ,
ಇಂಪಿನ ರಾಗ ಕೇಳಿ ನಲಿದಾಡಿವೆ.

ಜೆ.ಎಲ್.ಲೀಲಾಮಹೇಶ್ವರ

About The Author

Leave a Reply

You cannot copy content of this page

Scroll to Top