ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗೊರೂರು ಅನಂತರಾಜು

ಸೇವೆಯ ಹಾದಿಯಲ್ಲಿ

ಸೇವೆಯ ಹಾದಿಯಲ್ಲಿ

ಗಾಂಧೀಜಿ
ಅಂದು ನೀವು ಹಣ ಅಧಿಕಾರ ತ್ಯಾಗ ಮಾಡಿ
ಸತ್ಯ ಅಹಿಂಸಾ ಮಾಗ೯ ಹಾದಿಯಲ್ಲಿ ನಡೆದಿರಿ
ಇಂದು ಜನಸೇವೆ ಮಾಡುತ್ತೇವೆಂದು
ಅಧಿಕಾರಕ್ಕೆ ಬರುತ್ತಿದ್ದಾರೆ
ಹಣ ಸೇವ್ ಮಾಡಿ ಅವರ ಮನೆ
ಉದ್ಧಾರ ಮಾಡಿಕೊಳ್ಳುತ್ತಿದ್ದಾರೆ
ನೋಡಬನ್ನಿ ಸರಿ ದಾರಿ ತೋರಬನ್ನಿ

ಗಾಂಧೀಜಿ
ಅಂದು ನಿಮ್ಮ ಮಾತಿಗೆ ಪ್ರಭಾವಿತರಾಗಿ ದೇಶಸೇವೆಗೆ ಜನ ಮುನ್ನುಗ್ಗಿ ಬರುತ್ತಿದ್ದರು
ನೀವು ಅದನ್ನು ಬಂಡವಾಳ ಮಾಡಿಕೊಳ್ಳಲಿಲ್ಲ
ಅಧಿಕಾರದ ಆಸೆ ನಿಮಗಿರಲಿಲ್ಲ
ನಿಮ್ಮ ನಿಸ್ವಾರ್ಥ ತ್ಯಾಗ ವಿಶ್ವಕ್ಕೆ ಮಾದರಿ
ಇಂದು ಜನನಾಯಕರು ಮಾತಿನ
ಬಂಡವಾಳ ಹೂಡಿ ಅಧಿಕಾರಕ್ಕೆ ಬರುತ್ತಾರೆ ಗೆದ್ದ ಮೇಲೆ ಕೊಟ್ಟ ಭರವಸೆ ಮರೆಯುತ್ತಿದ್ದಾರೆ
ನೋಡಬನ್ನಿ ನೀವು ನಡೆದ ದಾರಿ
ತೋರಬನ್ನಿ


 ಗೊರೂರು ಅನಂತರಾಜು

About The Author

Leave a Reply

You cannot copy content of this page

Scroll to Top