ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಂಚುಗಾರನಹಳ್ಳಿ ಸತೀಶ್

ಪ್ರತಿಬಿಂಬ

ನಾನು ಒಂಥರ ಕನ್ನಡಿಯ ಬಿಂಬ
ನಕ್ಕರು ಅತ್ತರು ಅದೇ ನೈಜತೆಯ ಕಂಬ
ದುಃಖದಲಿ ಮಳೆಯಲ್ಲಿ ನೆನೆಯುತ್ತಾ ಅಳುವೆನು
ಕಾರಣ ತಿಳಿಯದಿರಲಿ ಕಣ್ಣೀರು ಬೆರೆತು ಹೋಗಲಿ ಎಂದು

ನಾನು ಪ್ರತಿಬಿಂಬ ನೋಡಿ ನಿಜವೆಂದು ನಂಬುವನು
ಆ ಬಿಂಬಕ್ಕೆ ಪ್ರತ್ಯುತ್ತರ ನೀಡಿ ಮೂರ್ಖನಾದೆ
ಇಷ್ಟು ಸಾಕಲ್ಲವೇ ನಿನ್ನನ್ನು ಪ್ರೀತಿಸೋಕೆ
ಏಕೆಂದರೆ ಪ್ರೀತಿಯೇ ಮೂರ್ಖತನದ ಪರಮಾವಧಿ ಎಂದೆನಿಸಿದೆ ನನಗೆ

ಕನ್ನಡಿಯಲ್ಲಿ ನಿನ್ನ ಕಂಡು ಭಾವೋದ್ವೇಗಕ್ಕೊಳಗಾಗಿ
ಭಾವನೆಯ ಹಂಚಿಕೊಂಡವನು ನಾನು
ನನ್ನ ಬದುಕಿನ ಕನ್ನಡಿಯಲ್ಲಿ ಮುನ್ನುಡಿಯಾಗಿ ಬಂದು ಬೆನ್ನುಡಿಯಾಗಿ ಹೊರಡುವೆ ಎಂದು

ಬಾಹುಬಂಧನದಲಿ ಬಂಧಿಯಾಗುವೆ ಎಂದು ಕಾಯುತ್ತಿದ್ದೆ
ಭ್ರಮಾಲೋಕದಲ್ಲೆ ಸಂಚರಿಸಿ ಮರೀಚಿಕೆಯಾದೆ
ಕನಸಿಂದ ತಟ್ಟನೆ ಎದ್ದು ಉದ್ವೇಗಕ್ಕೊಳಗಾದೆ
ಹುಡುಕಾಡಿ ಅಲೆದಾಡಿ ಕೊರಗಾಡಿ ಮೂಕನಾದೆ

ಪ್ರೀತಿಯ ಗುಂಗಲ್ಲಿ ಅತ್ತು ಅತ್ತು ಮೌನಿಯಾದೆ
ಕೇಳಿ ಪಡೆಯಲು ನೀನು ಆಕಾಶ ನಾನು ಭೂಮಿ
ಅಜಗಜಾಂತರವೆನಿಸಿ ಬಿಕ್ಕಿಬಿಕ್ಕಿ ಸುಮ್ಮನಾದೆ
ದಿಟ ನೀನಿಲ್ಲದೆ ಬದುಕು ಭಾವನೆಗಳಿಲ್ಲದೆ ಬರಡಾಗಿದೆ


ಕಂಚುಗಾರನಹಳ್ಳಿ ಸತೀಶ್

About The Author

Leave a Reply

You cannot copy content of this page

Scroll to Top