ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಅರುಣಾ ನರೇಂದ್ರ

ಗಜಲ್

ಮೋಡ ಕಟ್ಟಿದೆ ಮುಗಿಲು ಮಳೆ ಸುರಿಯದೆ ಹೋಯಿತು
ನೀರಿರದೆ ಧರೆಯ ಮುತ್ತಿನ ಸೆರಗು ಕಣ್ಣೀರಲಿ ತೋಯಿತು

ಮಳೆಬಿಲ್ಲ ಬಣ್ಣ ನನಗಾಗಿ ತರುವೆನೆಂದಿದ್ದ ಅವನು
ರಾತ್ರಿ ಇಡಿ ಕೋಣೆಯ ದೀಪ ನಿದ್ದೆಯಿರದೆ ಉರಿಯಿತು

ಕಾಲ್ಗೆಜ್ಜೆಗೆ ನಶೆ ಏರಿದ ಹೊತ್ತು ದುಪ್ಪಟ್ಟ ಮೈ ಮರೆತಿದೆ
ನಡೆದಷ್ಟು ದಾರಿ ಸಿಗದ ನಿಲ್ದಾಣ ಹೆಜ್ಜೆ ನೋಯಿತು

ಗೂಡಿರದ ಹಕ್ಕಿ ಜೋಡಿರದ ಚ್ಚುಕ್ಕಿ ಚಳಿಯ ಶಪಿಸಿವೆ
ವತ್ತರಿಸಿ ಬಂದ ನಿಟ್ಟಿಸಿರ ಧಗೆಗೆ ಒಲುಮೆ ಕುದಿಯಿತು

ಸುಮ ಅರಳಿ ಗಂಧ ಸೂಸಿವೆ ಅವ ಬಂದಿದ್ದಾನೆ ಸಖಿ
ಘಾಸಿಯಾದ ಅರುಣಾಳ ಎದೆಗಾಯ ಮದ್ದಿರದೆ ಮಾಯಿತು


ಅರುಣಾ ನರೇಂದ್ರ

About The Author

Leave a Reply

You cannot copy content of this page

Scroll to Top