ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ವಾರ್ಷಿಕ ವಿಶೇಷಾಂಕ

ಡಾ ಸಾವಿತ್ರಿ ಮಹಾದೇವಪ್ಪ

ಬರದ ಮಳೆ

ಬರದ ಮಳೆಗೆ
ಭಾವನೆಗಳೇ
ಸುಟ್ಟು ಕರಕಲಾಗಿ
ಬಾಂಧವ್ಯ ಮರೆತು
ಬೇಯುತ್ತಿದೆ ಜೀವ
ಬಿಕ್ಕುವ ಎದೆಯೊಳಗೆ
ಕರುಣೆಯ ಹೂ ಕುಸುಮ
ಅರಳಲೊಲ್ಲದು
ನೊಂದ ರೈತನ ಕಂಬನಿಯು
ಕಾರ್ಮೋಡವಾಗಿ
ಸುರಿದು ಬೀಳಲೊಲ್ಲದು
ಕಾಯದಲ್ಲಿ ಕಾಯಕ
ಕಲಿಸಿದ ಅಪ್ಪ ಬಸವಣ್ಣನನು
ನೆನೆ ನೆನೆದು ಬಿತ್ತಲಿ ಬೆಳೆ
ಹರುಷ ಉಕ್ಕಿ ಬರಲಿ
ಬಾಳಿಗೆ ಮಳೆ
ಅವನಿಲ್ಲದ ನೆಲೆ ಇಲ್ಲ
ಅವನಿಲ್ಲದೆ ಬೆಳೆ ಇಲ್ಲ
ಸಮ ಸಮಾಜದ
ಅರಿವು ನೈಜ ವಾಗಿರಲಿ
ಪ್ರಾರ್ಥಿಸುವೆನು
ವರುಣದೇವ
ಕಠುಕರೆದೆಯನು ಕರಗಿಸಿ
ಒಮ್ಮೆಸುರಿದು ಬೀಳಲಿ ಭಾವವು
ಮುಂಗಾರಿನ ಗುಡುಗು ಸಿಡಿಲಿನಾವೇಶಕ್ಕೆ
ಭಯಗೊಳ್ಳದಿರಲಿ ತನುವು
——————-,—–


ಡಾ ಸಾವಿತ್ರಿ ಮಹಾದೇವಪ್ಪ

About The Author

Leave a Reply

You cannot copy content of this page

Scroll to Top