ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ತಳಮಳ

ಅವಳು ಬಿಟ್ಟು ಹೋದಳೇಕೆ
ಯಾವ ಕೋಪ ಬಂದಿತೋ
ಕರೆಯು ಇಲ್ಲ ಬರವು ಇಲ್ಲ
ಯಾಕೆ ಮನವು ನೊಂದಿತೋ

ಒಂದು ಕಾಲವಿತ್ತು ಸಲಿಗೆ
ಚಂದದಿಂದ ಜೊತೆಗೆ ನಡಿಗೆ
ಇಂದು ಗ್ರಹಣ ಹಿಡಿದ ಚಂದ್ರ
ಮುಖಿಯು ಇರದ ಕೊರಗಿದೆ

ಮುಚ್ಚುಮರೆಯನಿಡದ ಮಾತು
ಹುಚ್ಚು ಹಿಡಿಸುವಂಥ ಒನಪು
ಹಗಲು ಇರುಳು ಬೇಧವಿಲ್ಲ
ಭಾವವಿಲ್ಲ ಸೊರಗದೆ

ಮನದಲೇನು ಕಹಿಯ ಭಾವ
ಯಾರು ಬೇವು ತಿನಿಸಿ ನೋವ
ನೀಡಿ ಮಾಡಲೆಂದು ದೂರ
ನನ್ನನೆಂದು ಅರಿಯೆನು

ಸಿಹಿಯ ಸವಿಯ ಸವಿದು ನಲಿವ
ಮಹಿಯಲಿರಲು ಸೇರು ಎನುವ
ಕರೆಯ ಕೊಡುತಲಿರುವೆ ಬೇಗ
ಬೀಗ ತೆಗೆದು ಬಾರೆಯಾ


ಡಾ ಸುರೇಶ ನೆಗಳಗುಳಿ

About The Author

Leave a Reply

You cannot copy content of this page

Scroll to Top