ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಇವರು ಕೊಂದರು

ಇವರು ಕೊಂದರು
ನನ್ನ ಶರಣರ
ನಿತ್ಯ ಮರಣ ಹೋಮವು
ಸತ್ಯ ಹೇಳಿದ
ದಿಟ್ಟ ಯೋಧರು
ಕಷ್ಟ ಕೋಟಲೆ ಮೆಟ್ಟಿಲು

ಬುದ್ಧ ಬಸವನ
ಕೊಂದು ಬಿಟ್ಟರು
ಶಾಂತಿ ಸಮಾಧಿಯಾಯಿತು
ರಕ್ತ ಕೋಡಿ ಹರಿಯಿತು
ಕಲ್ಯಾಣ ಕಟುಕರ
ಕೇರಿಯಾಯಿತು

ಗಾಂಧಿಯ ಎದೆಗೆ
ಗುಂಡನಿಟ್ಟರು
ಅಹಿಂಸೆ ಕಗ್ಗೊಲೆಯಾಯಿತು
ಈಶ್ವರಚಂದ್ರರು
ವಿಷವನುಂಡರು
ಕ್ರೌರ್ಯ ನೆಲದಿ ಮೆರೆಯಿತು

ಅಂಧಶೃದ್ಧೆ ಹೋಗಲೆಂದ
ದಾಬೋಲ್ಕರ
ಹತ್ಯೆಯಾದರು
ಸತ್ಯ ಹೇಳಿದ
ಪನಸಾರೆ ಇಲ್ಲವಾದರು
ಭೂಮಿ ಮೇಲೆ

ಅಗೆದು ತೋರಿದ
ಇತಿಹಾಸ ಸಂಸ್ಕೃತಿ
ಇವರೇ ಕೊಂದರು ಕಲಬುರ್ಗಿಯವರನ್ನು
ಗೌರಿ ಲಂಕೇಶ್
ಗಟ್ಟಿ ಯೋಧಳು
ಮಣ್ಣಾದಳು ಮರ್ತ್ಯದಿ

ಮತ್ತೆ ಮತ್ತೆ ಕೊಲೆ ಹಿಂಸೆ
ಸಮತೆ ಶಾಂತಿ ಸಾಯುತಿಹವು
ಗೊಡ್ಡುಪುರಾಣ ಮೆರೆದವು
ಕ್ರಾಂತಿ ಕಹಳೆ
ಮೊಳಗಬೇಕು

ಮೌಡ್ಯ ಮೆಟ್ಟಿ ನಿಲ್ಲಬೇಕು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

9 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗಇವರು ಕೊಂದರು”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಸತ್ಯದ ಅನಾವರಣದ ಅಭಿವ್ಯಕ್ತಿ ಸುಂದರವಾಗಿದೆ ಸರ್ ಧನ್ಯವಾದಗಳು

  2. ನೇರ, ನಿಷ್ಟುರ ವ್ಯಕ್ತಿತ್ವದ , ವೈಚಾರಿಕತೆಯ ಕಗ್ಗೊಲೆ ಸರ್ ಇದು..ಕವನ ಬಹಳ ಅರ್ಥಪೂರ್ಣ ಹಾಗೂ ಮಾರ್ಮಿಕವಾಗಿ ಮೂಡಿ ಬಂದಿದೆ.

  3. ದೀಪಾ ಜಿಗಬಡ್ಡಿ

    ಬದಲಾವಣೆಗೆ ಹೇಳಿರುವ ಅರ್ಥಪೂರ್ಣ ಕವನ

  4. ಪ್ರೌಡ ಪರಾಕಾಷ್ಟೆಯ ಕವನ ಸರ

    ಸತ್ಯ ತೋಡಿಕೊಂಡ ನೋವಿನ ಅಳಲು

    1. ನಾಗರಾಜ್ ಹರಪನಹಳ್ಳಿ

      ಸತ್ಯವನ್ನು ದಾಖಲಿಸಿದ ಕವಿತೆ.
      ಕ್ಷುದ್ರ ಶಕ್ತಿಗಳ ಬಗ್ಗೆ, ವಚನ ಚಳುವಳಿಯ ಕೊಂದವರ ಬಗ್ಗೆ, ಬಿಜ್ಜಳನ ತಲೆ ಕೆಡಿಸಿದವರ ಬಗ್ಗೆ, ಬಸವಣ್ಣನ ಕಾಲದ ವಿರೋಧಿಗಳೇ, ಗೋವಿಂದ ಪನ್ಸಾರೆ, ದಾಬೋಲ್ಕರ್, ಡಾ.ಎಂ.ಎಂ.ಕಲಬುರ್ಗಿ , ಗೌರಿ ಲಂಕೇಶ್ ರ ಕಾಲದಲ್ಲೂ ಇದ್ದರು, ಈಗಲೂ ಇದ್ದಾರೆಂಬುದು ಕವಿತೆಯಲ್ಲಿ ಮುನ್ನೆಲೆಗೆ ಬರುವಂತೆ, ಧ್ವನಿಸಬೇಕು.

Leave a Reply

You cannot copy content of this page

Scroll to Top