ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಮು ಭಾವಜೀವಿ ಮುಸ್ಟೂರು

ಕಣ್ಣ ಹನಿಯೊಂದು

ಕಣ್ಣ ಹನಿಯೊಂದು ಜಾರುತಿರೆ
ನೋವು ಮಾಗಿದ ಕವನ
ಕಂಬನಿಯ ಧಾರೆ ಹರಿದರೆ
ನೊಂದ ಭಾವವೊಂದು ಸಂಕಲನ

ಮಿಡಿವ ಮನವು ಮುದುಡಿ
ಮೌನ ದಾಳಿಗೆ ಮೊಗವು ಬಾಡಿ
ಹೃದಯದಾಳದ ಮಿಡಿತ
ಮಥಿಸಿದ ಭಾವ ಅದಕೆ ಕಾರಣ

ಮಾತು ಹೇಳದ ನೂರು ಭಾವ
ಕಣ್ಣೀರಲಿ ದಂಡಿಯಾಗಿ ಕಂಡಿತು
ಯಾವ ಕಾರಣಕೋ ಹೊರ ಬರದ
ವೇದನೆಯು ಕಣ್ಣ ಬಿಂದಾಗಿ ಉದುರಿತು

ಕಾರ್ಮೋಡ ಕವಿದಾಗ ಸುರಿವ
ಜೋರು ಮಳೆ ಈ ಕಂಬನಿ
ಬದುಕ ಬವಣೆಯ ತಣಿಸುವ
ಮನದ ಸಾಂತ್ವಾನದ ದನಿ

ಅಳುವ ಕಣ್ಣಿನೊಳಗೆ
ಖಾಲಿ ಆಗದ ಒರತೆಯಿದು
ನೋವಿಗೊಂದು ಬಂಧುವಾಗಿ
ಮರೆಸುವುದದನೆಲ್ಲ ಜೊತೆಗಿದ್ದು

ಕಣ್ಣು ಮನದ ಕನ್ನಡಿ
ನೋವಿಗೂ ನಲಿವಿಗದುವೆ ಮನ್ನುಡಿ
ಕಂಬನಿಯ ವೇದನೆಯು
ಜಾರಲಿ ಆ ನೋವ ಮರೆಸಲು
—————————–

ಅಮು ಭಾವಜೀವಿ ಮುಸ್ಟೂರು

About The Author

Leave a Reply

You cannot copy content of this page

Scroll to Top