ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾ ಮಳೆರಾಯ

ಮರುಳಸಿದ್ದಪ್ಪ ದೊಡ್ಡಮನಿ

ಧರಣೆಲ್ಲಾ ದಣದಾಳ ಕರುಣದಿಂದಲಿ ಕರುಣಿಸು
ನೆಲವೆಲ್ಲ ಹಸಿಯಾಗಲಿ
ನಿನ್ನೊಳಗಿನ ಬಿಂಕ ಬಿಡು

ಕಂಕಿ ಬೆಳೆಯಲು ಕೊಂಕವೇಕೆ
ಸುಂಕದ ಕಾಳು ಹಕ್ಕಿ ಪಾಲು
ನೆಲದವ್ವನ ಉಡಿದುಂಬಿದರ
ಹಸನಾದಾವು ನಮ್ಮ ಬಾಳು

ನಮ್ಮ ನೀಚತನಕ ನಾಚ್ಯಾಕ
ಸುಮ್ಮನ ಕುಂತಿದಿ ಹೇಳು
ನಿನ್ನನ್ನ ಬಗೆ ಬಗೆದು
ಬದುಕ ನಡೆಸಿವಿ ಕೇಳು

ಧನ ದಾಹಕ ನಿನ್ನ ಸೆರಗ ಬಿಚ್ಚಿ
ಮಾನ ಮಾರಿ ಬಾಳ್ವೆ ಮಾಡಿವಿ
ಕಳಕೊಂಡ ಕಸುವ ಹುಡಿಕ್ಯಾಡಿ
ದಿನ ದಿನವು ಸತ್ತೇವಿ

ನಿನ್ನ ಮುನಿಸಿಗೆ ನಾವ್ಹೆಂಗ
ಈ ಲೋಕದಾಗ ಬದುಕತಿವಿ
ನಿನ್ನ ಅಂಗಲಾಚಿ ಬೇಡುವೆ
ಧರೆಗಿಳಿದು ಬಂದರ ನಾವು
ಉಳಿತಿವಿ.


ಮರುಳಸಿದ್ದಪ್ಪ ದೊಡ್ಡಮನಿ


About The Author

Leave a Reply

You cannot copy content of this page

Scroll to Top