ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಲ್ಲು ಕರಗಿಸಿ ಬಿಡಿ

ರೇಷ್ಮಾ ಕಂದಕೂರ

ಕರಗಿಸಿ ಬಿಡಿ ಕಲ್ಲು
ಒಲವ ಮೆಲ್ಲುಸಿರಲಿ
ಸಂಬಂಧಕೆ ಗಂಧ ತೀಡಿ
ಅನುರಾಗದ ಕಂಪು ಪೂಸುತ.

ಸ್ವಾರ್ಥದ ಓಕುಳಿಯಲಿ
ಮಿಂದೆದ್ದ ಮನವೇ
ಕೂಡಿ ಕಳೆವ ಲೆಕ್ಕಾಚಾರ ಏಕೆ
ಒಂದುಗೂಡುವ ಮಳೆಗರೆದು ಬಿಡು.

ಕೊಚ್ಚಿ ಹೋಗಲಿ ರಭಸಕೆ
ಮೈಮನವ ತೊಳೆಯಲು
ಕೊಚ್ಚೆ ಪಾಚಿಗೆ ನಾಚಿಕೆಯಾಗಲಿ
ರಚ್ಚೆ ಬಿಡದ ಮಳೆ ಬೆಚ್ಚಿ ಬೀಳಿಸಲಿ.

ಕರಗಲು ಬಿಡಿ
ದುಷ್ಟ ಶಕ್ತಿಗಳ ನಿವಾರಿಸಲು
ಮುಷ್ಟಿ ಬಿಗಿತವ ಸಡಿಲಿಸಿತ
ಹಗೆತನವ ಮೆಟ್ಟಿ ನಿಲ್ಲಲು.

ಅದೆಷ್ಟು ಕಾತರದಿ
ಬಾಧೆಗೊಳಪಡುವುದನ ತಪ್ಪಿಸಲು
ತಪ್ಪನು ತಿದ್ದುವುದಕೆ
ಸಿದ್ಧತೆಯಲಿ ಮನ್ನಡೆ.

ಚೆಲ್ಲಾಟ ವಬೇಡ
ಒಡನಾಟ ಸಾಕು
ವಸುದೈವ ಕುಟಂಬಕೆ
ನಸು ನಗುತ್ತಲೇ ಸಾಗು ಸಾಕು.

ಬಂದೇ ಬರಲಿ
ಕುಂದು ತಾಗದಂತೆ
ಕಲ್ಲು ಕರಗಿಸುವ ತವಕಕೆ
ಮಂದಹಾಸದ ನಗೆ ಬೀರಲಿ.

————-

ರೇಷ್ಮಾ ಕಂದಕೂರ

About The Author

2 thoughts on “ರೇಷ್ಮಾ ಕಂದಕೂರ ಕವಿತೆ-ಕಲ್ಲು ಕರಗಿಸಿ ಬಿಡಿ”

  1. ಕಲ್ಲು ಕರಗದು ಮನವು ಹಾಯಾಗದು.ಆಗುವುದು ತದ್ವಿರುದ್ಧ. ನಂಬಿಕೆಯ ನೆಲೆಯನರಸಿ.

Leave a Reply

You cannot copy content of this page

Scroll to Top