ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಭಾರತಿ ರವೀಂದ್ರಅಹ್ಮದಾಬಾದ್

ಹಾಯ್ಕಗಳು

ಮಣ್ಣಿನ ಕೂಜ
ತತ್ವ ಹೇಳಿದೆ, ಇರು
ನೀನು ತಣ್ಣಗೆ.

2)ಮೋಹದ ಕೂಪ
ಬದುಕಿಗೊಂದು ಶಾಪ
ಅರಿತು ಬಾಳು.

3) ಬೆಕ್ಕಿನ ಮನ
ಉಡಲು ಕಾವಿ ಬಟ್ಟೆ
ಸಿಕ್ಕಿ ತೆ ಮೋಕ್ಷ.

4) ನಲ್ಲನೇ ಕೇಳು
ಪ್ರೀತಿಯ ಕಾವು, ಬಾಳು
ಬೆಳದಿಂಗಳು.

5) ಮನದ ಓಣಿ
ನೆನಪು ಗಳ ಮೇಳ
ಬಾಳ ಸಂಜೆಗೆ

6)ಬಾನ ತುಂಬೆಲ್ಲಾ
ಹಕ್ಕಿಗಳದೇ ಓಳಿ
ಚಂದ್ರ ನಾಚಿದ.

7) ಒಲವ ಕಿಡಿ
ನೋಡು ಒಮ್ಮೆ ಉರಿಸಿ
ಹೃದಯ ಜ್ಯೋತಿ.

8) ನೋವು ಸಂಕಟ
ಎಂದೇoದೂ ಸುಳಿಯದು
ನಲ್ಲನ ಸಂಗ.

9) ಕಂದ ನಕ್ಕರೆ
ಹೂ ಮಳೆ ಸುರಿದಂತೆ
ದೇವ ವಿಸ್ಮಯ.

10) ಸೋನೆ ಸುರಿದು
ಇಳೆಯು ನಗುತಿರಲು
.ಪ್ರಕೃತಿ ಗಾನ.


ಭಾರತಿ ರವೀಂದ್ರ ಅಹ್ಮದಾಬಾದ್

About The Author

Leave a Reply

You cannot copy content of this page

Scroll to Top