ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ಹಗರಣ ಏಕೆ ಮಾಡುವೆ ಚೂರು ಮದಿರೆ ಕುಡಿದಿರುವೆ
ಕೆಂಗಣ್ಣಲಿ ಏಕೆ ನೋಡುವೆ ಚೂರು ಮದಿರೆ ಕುಡಿದಿರುವೆ

ಮನ ಬೇಡುವದು ನಿನ ನೋಡೆ ಸುಲಭದಿ ದಕ್ಕೆ ನೋಟಕೆ
ದೂರ ನನ್ಶ ಏಕೆ ತಳ್ಳುವೆ ಚೂರು ಮದಿರೆ ಕುಡಿದಿರುವೆ

ಕಣ್ಣಿನದೇಕೆ ತಪ್ಪಾದೀತು ಚಂದವಾಗಿ ಅದಕೆ ನೀ ಕಾಣಿಸೆ
ಅಷ್ಟು ಅಂದ ಏಕೆ ಇರುವೆ ಚೂರು ಮದಿರೆ ಕುಡಿದಿರುವೆ

ದೋಚಲಿಲ್ಲ ಯಾರ ನೂ ನಾನು ಕದಿಯಲಿಲ್ಲ ಏನನೊ ಎಲ್ಲೂ
ಕೀಳು ನೋಟ ಏಕೆ ಬೀರುವೆ ಚೂರು ಮದಿರೆ ಕುಡಿದಿರುವೆ

ಭಾಷಾ ಪಂಡಿತನಲ್ಲ ಪ್ರಚಾರ ಪ್ರಿಯನಲ್ಲ ಬಿರುದುಗಳು ಬೇಡೆನಗೆ
ತಿರಸ್ಕರಿಸುತ ಏಕೆ ಹೋಗುವೆ ಚೂರು ಮದಿರೆ.ಕುಡಿದಿರುವೆ.


ಬಾಗೇಪಲ್ಲಿ

About The Author

Leave a Reply

You cannot copy content of this page

Scroll to Top