ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಭಾವ ಕವನವಾಗಿದೆ

ಓ ಜೀವವೇ ,
ಎಳೆಯ ನಾನು
ಗೆಳೆಯ ನೀನು
ಮಧುರ ಮಾತು
ಸಿಹಿಯ ನುಡಿದು
ದಿನವ ಬೆಳಗಿದೆ
ಅನು ದಿನ
ನಿನ್ನ ಸ್ನೇಹದ
ಪ್ರೀತಿ ಮಳೆಗೆ
ಹಸಿರು ಚಿಗುರಿದೆ
ತನು ಮನ
ಪರುಷ ಮುಟ್ಟಿ
ಹೊನ್ನವಾಯಿತು
ತುಕ್ಕು ಹಿಡಿದ
ಕಬ್ಬಿಣ
ಭಾವ ಬೆಸುಗೆ
ನಗೆಯ ಸಂಭ್ರಮ
ನಿತ್ಯ ಹಸಿರು
ತೋರಣ
ನಿನ್ನ ಒಲವ
ಚೆಲುವು ರೂಪಕೆ
ದಿನ ದಿನಕೂ
ದಿಬ್ಬಣ
ಎಂತು ಮರೆಯಲಿ
ನಿನ್ನ ನೆನಪು
ನಿತ್ಯ ಬದುಕು
ನಿಬ್ಬಣ
ಗಟ್ಟಿಗೊಂಡಿದೆ
ಹೃದಯ ಭಾಷೆ
ಗೆಲುವು ಕಂಡಿದೆ
ಬದುಕಲಿ
ಸೋಲ ಮರೆಸಿದ
ಜೀವ ಜಯ

ಭಾವ ಕವನವಾಗಿದೆ.


ಡಾ ಶಶಿಕಾಂತ ಪಟ್ಟಣ ರಾಮದುರ್ಗ


About The Author

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭಾವ ಕವನವಾಗಿದೆ”

  1. ಅತ್ಯುತ್ತಮ ಸುಂದರ ಅಭಿವ್ಯಕ್ತಿ ಸ್ವಾತಂತ್ರ್ಯ

  2. ದೀಪಾ ಜಿಗಬಡ್ಡಿ

    ಸುಂದರ ಭಾವ ತೋರಣ ನಿಮ್ಮ ಕವನ ಸರ್

  3. ತನು ಮನ
    ಪರುಷ ಮುಟ್ಟಿ
    ಹೊನ್ನವಾಯಿತು
    ಎಂಥ ಅತ್ಯದ್ಭುತ ಪ್ರೀತಿಯ ಪರಾಕಾಷ್ಟೆ

  4. Indira Motebennur

    ಎಂತು ಮರೆಯಲಿ
    ನಿನ್ನ ನೆನಪು
    ನಿತ್ಯ ಬದುಕು
    ನಿಬ್ಬಣ
    ಜೀವದ ಭಾವ ಕವನವಾದ ಪರಿ ಅನನ್ಯ..ಅನುಪಮ…

Leave a Reply

You cannot copy content of this page

Scroll to Top