ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಸತ್ಯ-ಸತ್ವ..!

ಬಯಸಿದಂತಲ್ಲ ಬದುಕು
ಭಾವಿಸಿದಂತೆ ಬದುಕು
ಎಣಿಸಿದಂತಲ್ಲ ಬೆಳಕು
ಋಣಿಸಿದಂತೆ ಬೆಳಕು.!

ನುಡಿದಂತಲ್ಲ ಜೀವನ
ನಡೆದಂತೆ ಜೀವನ
ಸಾಗಿದಂತಲ್ಲ ಪಯಣ
ಸಂಭ್ರಮಿಸಿದಂತೆ ಪಯಣ.!

ಬೆಳೆಸಿದಂತಲ್ಲ ದೇಹ
ದಣಿಸಿದಂತೆ ದೇಹ..
ವಿಶ್ರಮಿಸಿದಂತಲ್ಲ ಮೋದ
ಶ್ರಮಿಸಿದಂತೆ ಆಮೋದ.!

ಉಳಿಸಿದಂತಲ್ಲ ಗಳಿಕೆ
ಬಳಸಿದಂತೆ ಗಳಿಕೆ
ಬೀಗಿದಂತೆಲ್ಲ ಘನತೆ
ಬಾಗಿದಂತೆ ಘನತೆ.!


ಎ.ಎನ್.ರಮೇಶ್. ಗುಬ್ಬಿ.

About The Author

Leave a Reply

You cannot copy content of this page

Scroll to Top