ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗುಣಾಜೆ ರಾಮಚಂದ್ರ ಭಟ್

ಬದುಕು ಕಹಿ

ಪರಿಸರ ಕೆಡಿಸಿದ ನರನಿಗೆ ಕಾದಿದೆ
ದುರಿತವು ಮಾತ್ರ ಬದುಕಿನಲಿ..

ಹಸಿರಿನ ಕಾಡಿನ ಬಸಿರನು ಬಗೆದಿಹ
ನಸುರನು ಮನುಜ ಬಳಲುವನು..

ಬೆಟ್ಟದ ಬುಡದಲಿ ಹುಟ್ಟಿದ ನದಿಯನು
ಕಟ್ಟುತ ತಡೆಯ,ಬಿಗಿದಿಹನು..

ಕೆರೆಗಳ ಮುಚ್ಚುತ ಕೊರೆದನು ಭೂಮಿಯ
ಬರಿದನು ಮಾಡಿ ಜಲ ಸೆಲೆಯ

ನೀರನು ಸೆಳೆಯುವ ದಾರಿಯು ಮರಗಳು
ಬೇರನು ಬಿಡದೆ ಕಡಿದೊಗೆದ..

ಮಲಿನತೆ ತುಂಬಿದ ನೆಲದಲಿಯೆಲ್ಲೆಡೆ
ಜಲವನು ಕೆಡಿಸಿ ಬದುಕು ಕಹಿ..

ಕಾಡನು ಕಡಿಯುತ ನಾಡನು ಸೃಜಿಸುತ
ಪೀಡಕ ಮನುಜ ಬಳಲುವನು


About The Author

1 thought on “ಗುಣಾಜೆ ರಾಮಚಂದ್ರ ಭಟ್ ಕವಿತೆ-ಬದುಕು ಕಹಿ”

  1. ಎನ್. ಸುಬ್ರಾಯ ಭಟ್

    ಪರಿಸರ ಕಾಳಜಿಯ ಆಕರ್ಷಕ ರಚನೆ

Leave a Reply

You cannot copy content of this page

Scroll to Top