ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಸಂಸಾರ ಸಾಗರ

ಸಂಸಾರ ಸಾಗರದಿ
ಈಜಲು ಮನವಾಗಬೇಕು
ಶಾಂತಸಾಗರ,
ಅಹಂಕಾರದ ಕೋಟೆಯ
ಮನದಲಿ ಕಟ್ಟಿ,
ಒಲವಿನ ಹೃದಯವ
ದೂರದಿ ಅಟ್ಟಿದರೆ
ಬದುಕು
ಮೂರಾಬಟ್ಟೆ,
ನಂಬಿಕೆಯ
ಗೋಡೆಯೇ ಬಿರುಕಾಗಿ
ಮಾತಿನ ಸಿಡಿಲಿಗೆ
ಸಂಬಂಧ ಪುಡಿಯಾದ
ಮಣ್ಣಂಗಟ್ಟಿ;
ಹಣ ಅಧಿಕಾರದ
ಮದವು,ಜೀವನ
ಮುಳುಗಿಸುವ
ಪ್ರವಾಹವು,
ಚಟದ ಗಂಡಿಗೆ
ಹಟದ ಹೆಣ್ಣಿಗೆ
ಜೀವನ
ಸಿಗರೇಟಿನ ಹೊಗೆಯಂತೆ
ಎಳೆದಾಗ ಸವಿ,ಬಿಟ್ಟಾಗ
ವಿಷದಂತೆ ಭವಿಷ್ಯ
ನರಕ,
ಮನಸರಿಯದ ಎದೆಗಳು
ಚಾಡಿಕೋರರ ಬಾಯಿಗೆ
ಆಹಾರ,
ಬದುಕಿನ ವಿನಾಶಕ್ಕೆ
ತಾವೇ ಮಾಡಿಕೊಂಡ
ಸಂಚಕಾರ !!


About The Author

Leave a Reply

You cannot copy content of this page

Scroll to Top