ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಿವಪ್ರಸಾದ್ ಕೊಕ್ಕಡ

ಎನ್ನ ಮನದನ್ನೆ

ಮಲ್ಲಿಕಾ ಲತೆಗಳ ಬಳಿಯಿಂದ
ಹಚ್ಚ ಹಸುರಿನ ಸಿರಿಯಿಂದ
ಬಂದಳಾ ಸುಕೋಮಲೆ ಲಲಿತೆ
ನೋಡುತಲೆ ಒಲವಾಗಿ ನನ್ನೇ ನಾ ಮರೆತೆ॥

ಲಂಗದಾವಣಿಯವಳ ಕುಡಿನೋಟಕೆ ಸೊತೆನು
ಮನದ ಮಿಡಿತದ ತವಕ ಹೇಳದಾದೆನು
ಕಣ್ಣಂಚಿನ ಮಿಂಚು ಸನಿಹಕೆ ಬಂದು
ಎನ್ನೆದೆಯ ಸ್ಪರ್ಶಿಸಿತು ಪ್ರೀತಿಸು ಎಂದು॥

ಎನ್ನ ಅರಸಿ ಆಗುವೆಯಾ ಓ ಹೊನ್ನರಸಿ
ಬಾಳೋಣ ಜೊತೆ ಜೊತೆಯಲಿ ಭಾವಬೆರೆಸಿ
ಸಾಂಪ್ರದಾಯಿಕ ಉಡುಗೆ ಸಮನಾಯ್ತು ಇಬ್ಬರಿಗೆ
ಸಾಕ್ಷಿಯಾಗಿದೆ ನಮ್ಮಿಬ್ಬರ ಮನಸ್ಥಿತಿಗೆ ॥

ಕೇಸರಿ ಬಿಳಿ ಹಸಿರು ನೀಲಿ ಬಣ್ಣಗಳು
ಸತ್ಯ ಶಾಂತಿ ತ್ಯಾಗ ಶೌರ್ಯದ ಸಂಕೇತಗಳು
ನಮ್ಮ ಜೀವನದಿ ಇರಲಿ ಈ ಮೌಲ್ಯಗಳು
ನಿನ್ನ ನೆನೆಯುತಿದೆ ನನ್ನೆದೆ ಬಡಿತದ ಪ್ರತೀ ಶಬ್ದಗಳು॥


About The Author

Leave a Reply

You cannot copy content of this page

Scroll to Top