ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ನಕ್ಷತ್ರದ ಥಳುಕಿಗೆ ಮಾರುಹೋಗಿ ಬೆಳದಿಂಗಳನು ಕಡೆಗಾಣಿಸದಿರು ತಂಗೆವ್ವ
ಸಂಜೆಗತ್ತಲಾದಾಗ ಪುಟ್ಟ ದೀಪವೆಸರಿ ಸೂರ್ಯನ ನೆಚ್ಚಿಕೂರದಿರು ತಂಗೆವ್ವ

ಹಣವಂತನಾದರೆ ಸಾಲದು ಪ್ರೀತಿ ಇರಬೇಕು ಬದಲಿಗೆ ಗುಣವಂತ ನಾಗೆ ಸಾಕುಮ್ಮ
ತುತ್ತು ಅನ್ನ ಸಾಕು ಬದುಕಲು ನೀತಿ ದುಡಿಮೆ ಆಗಿರಬೇಕು ಮರೆಯದಿರು ತಂಗೆವ್ವ

ಪೊದೆಯಿಂದ ಬೇಟೆ ಆಡುವ ಎರಡಕ್ಕಿಂತ ಕೈಲಿ ಲಭ್ಯ ಇರುವ ಒಂದು ಒಳಿತಲ್ಲವೇ
ಇರುವ ಭಾಗ್ಯಕೆ ನಮಿಸಿ ಹರ್ಷಿಸು ಇಲ್ಲದಿರುವುದಕೆ ವೃಥಾ ಕೊರಗದಿರು ತಂಗೆವ್ವ

ನಿನ್ನೂರ ಗಂಗವ್ವ ನಿನ್ನ ಚನ್ನಾಗಿ ಬಲ್ಲಳು ನಿನ್ನ ಬೇಕು ಬೇಡಗಳ ಅರಿವಿದೆ ಆಕೆಗೆ
ದೂರದಾ ಕಾಶಿ ಭೈರಾಗಿ ದೇವರ ನಂಬಿ ಹೋಗಿ ಕೈಯೊಡ್ಡಿ ಬೇಡದಿರು ತಂಗೆವ್ವ

ಕೃಷ್ಣಾ! ಸುಖ ವೆಂಬುದೊಂದು ಮಾನಸಿಕ ಸ್ಥಿತಿ ಯಂತೆ ಜ್ಞಾನಿಗಳು ಹೇಳಿಹರು
ನೋವು ನಲಿವು ಅವಳಿ ಜವಳಿಯಂತೆ ಗಿಬ್ರಾನರ ನುಡಿ ಮರುಗದಿರು ತಂಗೆವ್ವ.


ಬಾಗೇಪಲ್ಲಿ

About The Author

Leave a Reply

You cannot copy content of this page

Scroll to Top