ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗುಣಾಜೆ ರಾಮಚಂದ್ರ ಭಟ್

ಕವಿ ಮನಸು

ಕವಿತೆಯನೋದುತ ಸವಿಯಲು ಸಂತಸ
ದಿವಸವು ಕವನ ಬರೆ ಕವಿಯೆ..

ಕವಿದಿವೆ ಭಾವನೆ ಕವಿಯೆದೆ ತುಂಬಿದೆ
ದವನದ ಹಾಗೆ ಪರಿಮಳಿಸೆ ..

ಮೂಡುತ ಬರುತಿದೆ ಹಾಡುವ ರಚನೆಯು
ದೂಡಲು ಬೇನೆ ಮನಸಿನಲಿ..

ಗಾಯಕಿ ಗಾನವು ದಾಯಕ ತೋಷವು
ಮಾಯದೆ ನಿಂತು ಪುಳಕಿಸಿದೆ..

ಚಂದದ ಬರೆಹವು ನಂದದುಯೆಂದಿಗು
ಸಿಂಧುವು ನಮ್ಮ ಕವಿ ಮನಸು..

ಸಾವಿರ ವರುಷವು ಸಾವನು ಕಾಣದ
ಜೀವನ ಕವಿಗೆ ವರವಹುದು ..

ಮನ್ನಿಸಿ ಕವಿಗಳ ಹೊನ್ನನು ನೀಡುತ
ಬಣ್ಣಿಸಿಯವನ ಹಿರಿಮೆಯನು..

ದವನ =ಪಚ್ಚೆತೆನೆ(ಸುವಾಸನೆಯುಳ್ಳ ಒಂದು ಬಗೆಯ ಎಲೆಯುಳ್ಳ ಗಿಡ),ದಾಯಕ= ನೀಡುವ;ಸಿಂಧು=ಕಡಲು .


ಗುಣಾಜೆ ರಾಮಚಂದ್ರ ಭಟ್

About The Author

Leave a Reply

You cannot copy content of this page

Scroll to Top